Monday, March 2, 2020

Indian Muslim Clergy to Counter ISIS Propaganda ಆದರೆ ಅವರು ವಾಕ್ಚಾತುರ್ಯವನ್ನು ಮೀರಿ ನಿಜವಾದ ಪ್ರತಿ-ನಿರೂಪಣೆಯಿಂದ ಸಾಂಪ್ರದಾಯಿಕ ಇಸ್ಲಾಮಿಕ್ ಧರ್ಮಶಾಸ್ತ್ರದ ಆಧಾರದ ಮೇಲೆ ಜಿಹಾದಿಸಂ ಅನ್ನು ನಿರಾಕರಿಸಬೇಕು




Sultan Shahin, Founder-Editor, New Age Islam

ನ್ಯೂ ಏಜ್ ಇಸ್ಲಾಂನ ಸ್ಥಾಪಕ-ಸಂಪಾದಕ ಸುಲ್ತಾನ್ ಶಹೀನ್ ಅವರಿಂದ,
19 ನವೆಂಬರ್ 2019

ಮುಸ್ಲಿಂ ಯುವಕರು ಐಸಿಸ್‌ನ ಜಿಹಾದ್ ಸಾಹಿತ್ಯದ ಬಲೆಗೆ ಬೀಳದಂತೆ ತಡೆಯಲು ಭಾರತದ ಅಂತರ್ಜಾಲ ಆಧಾರಿತ "ಧಾರ್ಮಿಕ ಮುಖಂಡರ ಅಧಿಕೃತವಲ್ಲದ ಚಾನೆಲ್" ಅನ್ನು ರಚಿಸಲು ಪ್ರಾರಂಭಿಸಿದೆ ಎಂದು ಸರ್ಕಾರದ ಮೂಲಗಳನ್ನು ಉಲ್ಲೇಖಿಸಿ ‘ಔಟ್‌ಲುಕ್ಇಂಡಿಯಾ.ಕಾಂ’ನ ವರದಿಯೊಂದು ಬಹಿರಂಗಪಡಿಸಿದೆ. ಗೃಹ ಸಚಿವಾಲಯದ (ಎಂಎಚ್‌ಎ) ಹಿರಿಯ ಐಪಿಎಸ್ ಅಧಿಕಾರಿಯೊಬ್ಬರು "ಇದನ್ನು (ಐಸಿಸ್ ಆನ್‌ಲೈನ್ ಪ್ರಚಾರ) ಇದೇ ರೀತಿ ಎದುರಿಸಬೇಕಾಗಿದೆ" ಎಂದು ಪೋಸ್ಟ್ ಮಾಡಿರುವುದನ್ನು ಅದು ಉಲ್ಲೇಖಿಸುತ್ತದೆ ಮತ್ತು ಕೇವಲ ಮುಸ್ಲಿಂ ಯುವಕರನ್ನು ಬಂಧಿಸುವುದರಿಂದ ಸಂಭಾವ್ಯ ಬೆದರಿಕೆಯನ್ನು ಪರಿಹರಿಸಲಾಗುವುದಿಲ್ಲ. "ಐಸಿಸ್ ನಿರೂಪಣೆಯನ್ನು ಎದುರಿಸಲು ಯೂಟ್ಯೂಬ್ ಚಾನೆಲ್‌ಗಳು, ಪಾಡ್‌ಕಾಸ್ಟ್, ಸಾಮಾಜಿಕ ಮಾಧ್ಯಮ ಮತ್ತು ವೆಬ್‌ಸೈಟ್‌ಗಳಲ್ಲಿ ಖಾತೆಗಳನ್ನು ರಚಿಸಲು ಮುಸ್ಲಿಂ ಮೌಲವಿಗಳಿಗೆ ತರಬೇತಿಯನ್ನು ನೀಡಲಾಗುವುದುಎಂದು ಈ ವರದಿ ಹೇಳುತ್ತದೆ.
ಇದೊಂದು ಶ್ಲಾಘನೀಯ ಉಪಕ್ರಮವಾಗಿದ್ದು, ಇದನ್ನು ಸ್ವಾಗತಿಸಬೇಕಾಗಿದೆ. ಆದರೆ ಇದು ಕೆಲವು ಗಂಭೀರ ಪ್ರತಿಫಲನಕ್ಕೂ ಕರೆ ನೀಡುತ್ತದೆ.ಪ್ರಚಾರದ ವೀಡಿಯೊಗಳನ್ನು ತಯಾರಿಸುವ ತಂತ್ರಗಳನ್ನು ಉಲೆಮಾಗಳಿಗೆ ಕಲಿಸಬಹುದು.ಆದರೆ, ಅದು ಹೆಚ್ಚಿನ ಮೂಲಭೂತ ವಿಷಯದ ಸಮಸ್ಯೆಯ ವಿಶ್ಲೇಷಣೆಯ ಹೊರತು ಪರಿಣಾಮಕಾರಿಯಾಗಬಹುದೇ?ಉದಾಹರಣೆಗೆ, ಉಲೆಮಾಗಳ ನಿರೂಪಣೆ ಅಥವಾ ಪ್ರತಿ-ನಿರೂಪಣೆ ಯಾವುದಾಗಿರಬಹುದು? 
ಔಟ್‌ಲುಕ್ಇಂಡಿಯಾವರದಿಯು ಒಂದು ಸುಳಿವನ್ನು ನೀಡುತ್ತದೆ:"ಐಸಿಸ್ ಮುಖ್ಯಸ್ಥ ಅಬೂಬಕರ್ ಅಲ್-ಬಗ್ದಾದಿಯು ಮಹಿಳೆಯರು ಮತ್ತು ಮಕ್ಕಳ ಮೇಲೆ ನಡೆಸಿದ ದೌರ್ಜನ್ಯವನ್ನು ಬೆಳಕಿಗೆ ತರಲು / ಎತ್ತಿ ಹಿಡಿಯಲು ಮೌಲವಿಗಳಿಗೆ ನಿರ್ದೇಶಿಸಲಾಗಿದೆ."ಆದರೆ ಮೌಲವಿಗಳು ಈ ರೀತಿಯ ಅಭಿಯಾನದಲ್ಲಿ ತೊಡಗಿಸಿಕೊಳ್ಳುವುದು ನಮಗೆ ಬೇಕೇ?. ಇದನ್ನು ಸಂವಹನದ ಸಾಮಾನ್ಯ ಚಾನಲ್‌ಗಳಿಂದ ಸಹಹೆಚ್ಚು ಪರಿಣಾಮಕಾರಿಯನ್ನಾಗಿ ಮಾಡಬಹುದು. ಯಾವುದೇ ಮುದ್ರಣ ಪತ್ರಕರ್ತ ಅಥವಾ ಟಿವಿ ನಿರೂಪಕರು ಸಹ ಇದನ್ನು ಮಾಡಬಹುದು. ನಮ್ಮ ಮಾಧ್ಯಮಗಳು ವರ್ಷಾನುವರ್ಷಗಳಿಂದಇದನ್ನು ಪರಿಣಾಮಕಾರಿಯಾಗಿ ಮಾಡುತ್ತಿವೆ.
ಜಿಹಾದಿ ಧರ್ಮಶಾಸ್ತ್ರವನ್ನು ವಿರೋಧಿಸುವುದಕ್ಕಾಗಿ ನಮಗೆ ಮೌಲವಿಗಳ ಅವಶ್ಯಕತೆ ಇದೆ, ಐಸಿಸ್ ದೌರ್ಜನ್ಯ, ಅಪಹರಣಗಳು, ಲೈಂಗಿಕ ಗುಲಾಮಗಿರಿ, ಮುಸ್ಲಿಮರು ಮತ್ತು ಮುಸ್ಲಿಮೇತರರ ಮೇಲಿನ ದಾಳಿ ಮುಂತಾದವುಗಳನ್ನು ಖಂಡಿಸುವದಕ್ಕಲ್ಲ, ಯಾವುದೇ ಸಂವೇದನಾಶೀಲ ವ್ಯಕ್ತಿ ಅಷ್ಟೇ ಪರಿಣಾಮಕಾರಿಯಾಗಿಈ ದೌರ್ಜನ್ಯವನ್ನು ಖಂಡಿಸಬಹುದು. 
ಪ್ರಾಥಮಿಕವಾಗಿ ಚಿಂತನೆಯ ಎಲ್ಲ ಶಾಲೆಗಳ ಒಮ್ಮತದ ಸಾಂಪ್ರದಾಯಿಕ ಇಸ್ಲಾಮಿಕ್ ಧರ್ಮಶಾಸ್ತ್ರವನ್ನು ಆಧರಿಸಿದಹಿಂಸಾಚಾರ ಮತ್ತು ಪ್ರಾಬಲ್ಯವಾದಿಯಾದ ಪ್ರತ್ಯೇಕವಾದಿ ಜಿಹಾದಿ ಧರ್ಮಶಾಸ್ತ್ರವನ್ನು ಎದುರಿಸಲು ಮೌಲವಿಗಳ ಅಗತ್ಯವಿದೆ. ಶಾಂತಿ ಮತ್ತು ಬಹುತ್ವವನ್ನೊಳಗೊಂಡ ಹೊಸ ಧರ್ಮಶಾಸ್ತ್ರವನ್ನು ಆಧರಿಸಿದ ಪ್ರತಿ-ನಿರೂಪಣೆಯ ಮೂಲಕ ಇದನ್ನು ಮಾಡಬೇಕಾಗಿದೆ. ಆದರೆ ಅದನ್ನು ಮಾಡಲು ಮೌಲವಿಗಳು ಮದರಸಾಗಳಲ್ಲಿ ಕಲಿಸಲಾಗುವ ಸಾಂಪ್ರದಾಯಿಕ ಧರ್ಮಶಾಸ್ತ್ರಕ್ಕಿಂತ ಭಿನ್ನವಾದ ಹೊಸ ಧರ್ಮಶಾಸ್ತ್ರವನ್ನು ವಿಕಸಿಸುವತ್ತ ಕೆಲಸ ಮಾಡಬೇಕಾಗುತ್ತದೆ. ಜಿಹಾದಿಗಳು ತಮ್ಮ ಸಂದೇಶದ ಪ್ರಚಾರ ಮಾಡಲು ಇದೇ ಹಳೆಯ ಧರ್ಮಶಾಸ್ತ್ರವನ್ನು ಬಳಸುತ್ತಾರೆ. 
ಯಾವುದೇ ಹೊಸ ಕಲ್ಪನೆಯನ್ನು ಹೇಳದೇ ಪ್ರಪಂಚದಾದ್ಯಂತದಲ್ಲಿರುವ ನಮ್ಮ ಸಾವಿರಾರು ಯುವಕರ ಕಲ್ಪನೆಯನ್ನು ಜಿಹಾದಿಗಳು ಸೆರೆಹಿಡಿಯಲು ಸಾಧ್ಯವಾಗಲು ಕಾರಣವನ್ನು ಸಾಕಷ್ಟು ಒತ್ತಿ ಹೇಳಲಾಗುವುದಿಲ್ಲ. ಅವರು ಕೇವಲ ಉಲೆಮಾಗಳು (ಧಾರ್ಮಿಕ ವಿದ್ವಾಂಸರು) ಬೋಧಿಸುತ್ತಿರುವುದನ್ನು ಅಭ್ಯಾಸ ಮಾಡುವ ಮಾರ್ಗವನ್ನು ತೋರಿಸುತ್ತಿದ್ದಾರೆ. ಜಿಹಾದಿ ನಿರೂಪಣೆಯು ಇತರ ಎಲ್ಲ ಧಾರ್ಮಿಕ ನಂಬಿಕೆಗಳ ಮೇಲೆ ಇಸ್ಲಾಂ ಪ್ರಾಬಲ್ಯದ ಸಾಂಪ್ರದಾಯಿಕ ಇಸ್ಲಾಮಿಕ್ ಧರ್ಮಶಾಸ್ತ್ರದ ನಿರೂಪಣೆಯಾಗಿದೆ, ಮತ್ತು ಅದರ ನಿರ್ಮೂಲನೆ ಮಾಡುವುದು ಮಾನವೀಯತೆಯು ಮಾಡಬಹುದಾದ ಅತಿದೊಡ್ಡ ಅಪರಾಧವೆಂದು ಅದು ಪರಿಗಣಿಸುತ್ತದೆ, ವಿಶೇಷವಾಗಿ ಶಿರ್ಕ್ ಎಂದರೆಬಹುದೇವತೆ ಅಥವಾ ವಿಗ್ರಹಾರಾಧನೆ, ಮತ್ತು ಕುಫ್ರ್ ಎಂದರೆಹಜರತ್ ಮೊಹಮ್ಮದ್ ಅವರ ಪೈಗಂಬರತ್ವವನ್ನು ತಿರಸ್ಕರಿಸುವುದು ( ಪಿಬಿಯುಎಚ್). ಇಮಾಮ್ ಗಜಾಲಿ (11 ನೇ -12 ನೇ ಶತಮಾನ) ಯಿಂದ ಇಮಾಮ್ ಇಬ್ನ್-ಎ-ತೈಮಿಯಾ (13 ನೇ -14 ನೇ ಶತಮಾನ), ಮುಜಾದ್ದೀದ್ ಆಲ್ಫ್-ಎ-ಸಾನಿ ಶೇಖ್ ಸಿರ್ಹಿಂದಿ (16 -17 ನೇ ಶತಮಾನ), ಶಾ ವಲಿಉಲ್ಲಾ ಮುಹಾದ್ದೀಸ್ ದೆಹ್ಲವಿ (18 ನೇ ಶತಮಾನ) ರ ವರೆಗೆ ಇಸ್ಲಾಂ ಧರ್ಮದ ಎಲ್ಲ ಪ್ರಖ್ಯಾತ ವಿದ್ವಾಂಸರುಇಸ್ಲಾಂ ಧರ್ಮದ ರಾಜಕೀಯ ದೃಷ್ಟಿಯನ್ನು ತೋರಿಸಿದ್ದಾರೆ ಮತ್ತುಅಂತಿಮವಾಗಿ 20 ನೇ ಶತಮಾನದಲ್ಲಿ ಅದಕ್ಕೆ ಮೌಲಾನಾ ಸೈಯದ್ ಅಬುಲ್ ಅಲಾ ಮೌದುಡಿ, ಹಸನ್ ಅಲ್-ಬನ್ನಾ ಮತ್ತು ಸೈಯದ್ ಕುತುಬ್ ಅವರು ಹೆಚ್ಚು ಖಚಿತವಾದ ರೂಪವನ್ನು ನೀಡಿದರು. 21 ನೇ ಶತಮಾನದ ಜಿಹಾದಿ ವಿಚಾರವಾದಿಗಳು ಈ ಸಾಂಪ್ರದಾಯಿಕ ನಿರೂಪಣೆಯ ಕೆಲವು ಭಾಗಗಳನ್ನು ಹೆಚ್ಚು ತೀವ್ರವಾಗಿ ಒತ್ತಿಹೇಳಿರಬಹುದು ಮತ್ತು ಇತರ ಕೆಲವು ಅಂಶಗಳ ಮಹತ್ವವನ್ನು ಕಡಿಮೆಗೊಳಿಸಿರಬಹುದು.ಆದರೆ ಅವರು ಸಂಪೂರ್ಣವಾಗಿ ಹೊಸದಾಗಿರುವ ಅಥವಾ ಆಮೂಲಾಗ್ರವಾಗಿ ವಿಭಿನ್ನವಾದ ಯಾವುದೇ ವಿಷಯವನ್ನು ಹೇಳುತ್ತಿಲ್ಲ.
ಜಿಹಾದಿ ಸಾಹಿತ್ಯವು ಇದ್ದಕ್ಕಿದ್ದಂತೆ ಆಕಾಶದಿಂದ ಇಳಿದಿಲ್ಲ. ಇದು ಒಸಾಮಾ ಬಿನ್ ಲಾದೆನ್ ಅಥವಾ "ಖಲೀಫಾ" ಅಬೂಬಕರ್ ಅಲ್-ಬಗ್ದಾದಿಯ ಸೃಷ್ಟಿಯಲ್ಲ. ಅವರ ವಿಶ್ವ ಪ್ರಾಬಲ್ಯದ ನಿರೂಪಣೆಯು, ಇಸ್ಲಾಂ ಧರ್ಮದ ಸಂದೇಶವನ್ನು ಸ್ವೀಕರಿಸದವರ ವಿರುದ್ಧ ಹೋರಾಡುವುದನ್ನು ಮೂಲತಃವಾಗಿ ನಮ್ಮ ಎಲ್ಲ ಮದರಸಾಗಳಲ್ಲಿ ಕಲಿಸಲ್ಪಟ್ಟಿದೆ. ದೇವರ ಏಕತೆ ಮತ್ತು ಮೊಹಮ್ಮದ್ (ಪಿಬಿಯುಎಚ್) ರ ಪೈಗಂಬರತ್ವನನ್ನು ಒಪ್ಪಿಕೊಳ್ಳದವರ ವಿರುದ್ಧ ಹೋರಾಡುವದು ಎಂಬ ಜಿಹಾದ್‌ನ ವ್ಯಾಖ್ಯಾನವು ಸುನ್ನಿ ಫಿಖ್ (ನ್ಯಾಯಶಾಸ್ತ್ರ) ದ ಶಾಲೆಯ ಪುಸ್ತಕಗಳಲ್ಲಿ ಅದು ಹನಾಫಿ, ಮಲಾಕಿ, ಶಫೀ ಅಥವಾ ಹನ್ಬಲಿ ಆಗಿರಲಿ ಪ್ರತಿಯೊಂದರಲ್ಲಿಕಂಡುಬರುತ್ತದೆ. ವಾಸ್ತವಿಕವಾಗಿ, ರಾಜಕೀಯ ಇಸ್ಲಾಂ ಧರ್ಮದ ವಿಷಯಗಳಲ್ಲಿ ಶಿಯಾ ಧರ್ಮಶಾಸ್ತ್ರವು ಸಹ ಸುನ್ನಿಯವರ ಧರ್ಮಶಾಸ್ತ್ರಕ್ಕಿಂತ ಹೆಚ್ಚು ಭಿನ್ನವಾಗಿಲ್ಲ. ಅವರೂ ಇಸ್ಲಾಂ ಧರ್ಮಕ್ಕಾಗಿ ವಿಶ್ವ ಪ್ರಾಬಲ್ಯವನ್ನು ಬಯಸುತ್ತಾರೆ ಮತ್ತು ಎಲ್ಲಾ ಮುಸ್ಲಿಮೇತರರನ್ನು ನಿಗ್ರಹಿಸುವ ಬಯಕೆಯನ್ನು ಹೊಂದಿರುತ್ತಾರೆ.
ಈ ಪರಿಸ್ಥಿತಿಯನ್ನು ಮೌಲಾನಾ ವಹಿದುದ್ದೀನ್ ಖಾನ್ ಅವರಂತಹ ಶಾಂತಿ ಮತ್ತು ಬಹುತ್ವದ ಅಜೇಯ ಯೋಧರು ರಾಜಕೀಯ ಇಸ್ಲಾಂ ಧರ್ಮದ ಶಕ್ತಿಯನ್ನು ಹೇಗೆ ಒಪ್ಪಿಕೊಳ್ಳಬೇಕಾಗಿತ್ತು ಆದರೆ ಮೌಲಾನಾ ಅಬುಲ್ ಅಲಾ ಮೌದುಡಿ ಮಾಡಿದ ತಪ್ಪುಗಳನ್ನು ಸಹ ತೋರಿಸುತ್ತಾರೆ ಎಂಬುದನ್ನು ನೋಡುವುದರೊಂದಿಗೆಚೆನ್ನಾಗಿ ಅರ್ಥಮಾಡಿಕೊಳ್ಳಬಹುದು. ಅವರು ಹೇಳುತ್ತಾರೆ: "ಬೌದ್ಧಿಕ ಅಥವಾ ಮಿಷನರಿ ಕ್ಷೇತ್ರಕ್ಕೆ ಸೀಮಿತವಾದ ಯಾವುದೇ ಹೋರಾಟವು ಈ ಮೂಢನಂಬಿಕೆಯ (ಶಿರ್ಕ್, ಕುಫ್ರ್) ಹಿಡಿತದಿಂದ ಮನುಷ್ಯನನ್ನು ಹೊರಹಾಕಲು ಸಾಕಾಗಲಿಲ್ಲ ಎಂದು ಸಾವಿರಾರು ವರ್ಷಗಳ ಅವಧಿಯಲ್ಲಿ ಪೈಗಂಬರರಿಂದ ಮಾಡಲಾದ ಪ್ರಯತ್ನಗಳು ಸಾಬೀತು ಮಾಡಿವೆ. (ಆದ್ದರಿಂದ) ಅವನು (ಪೈಗಂಬರ ಮೊಹಮ್ಮದ್) ಒಬ್ಬ ಡಾಇ (ಸರಿಯಾದ ನಂಬಿಕೆಗಳನ್ನು ಪ್ರಚಾರ ಮಾಡುವ ಮಿಷನರಿ) ಹಾಗೂ ಮಾಹಿ (ಸುಳ್ಳು ನಂಬಿಕೆಗಳ ನಿರ್ಮೂಲಕ) ಆಗಿರಬೇಕು ಎಂಬುದು ದೇವರ ಆದೇಶವಾಗಿತ್ತು.ಮೂಢನಂಬಿಕೆಗಳು (ಶಿರ್ಕ್ ಮತ್ತು ಕುಫ್ರ್) ಸುಳ್ಳನ್ನು ಆಧರಿಸಿವೆ ಎಂದು ಜಗತ್ತಿಗೆ ಘೋಷಿಸುವುದು ಮಾತ್ರವಲ್ಲ, ಅಗತ್ಯವಿದ್ದಲ್ಲಿ, ಆ ವ್ಯವಸ್ಥೆಯನ್ನು ಸಾರ್ವಕಾಲಿಕವಾಗಿ ತೊಡೆದುಹಾಕಲು ಅವಶ್ಯವಿದ್ದರೆ ಮಿಲಿಟರಿ ಕ್ರಮವನ್ನು ಆಶ್ರಯಿಸುವುದು ಎಂಬ ಉದ್ದೇಶವನ್ನು ದೇವರು ಅವನಿಗೆ ವಹಿಸಿಕೊಟ್ಟನು ".
 [ಮೌಲಾನಾ ವಹಿದುದ್ದೀನ್ ಖಾನ್ ಅವರ “ಇಸ್ಲಾಂ - ಆಧುನಿಕ ಪ್ರಪಂಚದ ಸೃಷ್ಟಿಕರ್ತ” 2003 ರಲ್ಲಿ ಮರು ಮುದ್ರಿಸಲಾದ ಪುಸ್ತಕದಿಂದ].ಹೀಗಿದ್ದರೆ, ಜಿಹಾದಿಸಂ ಅನ್ನು ಬಲವಾಗಿ ವಿರೋಧಿಸುವವರ ಪ್ರಕಾರ, ಶಿರ್ಕ್ ಮತ್ತು ಕುಫ್ರ್ ನಂತಹ ಸುಳ್ಳು ನಂಬಿಕೆಗಳನ್ನು ಪ್ರಪಂಚದಿಂದ ತೊಡೆದುಹಾಕಲು ಪ್ರಯತ್ನಿಸುವುದರ ಮೂಲಕ ತಾವು ಕೇವಲ ಪೈಗಂಬರ ಮೊಹಮ್ಮದ್ (ಪಿಬಿಯುಎಚ್) ರವರ ಅಪೂರ್ಣ ಕಾರ್ಯವನ್ನು ನಿರ್ವಹಿಸುತ್ತಿದ್ದೇವೆ ಎಂದು ಜಿಹಾದಿಗಳು ಏಕೆ ಹೇಳಿಕೊಳ್ಳಬಾರದು?.
ಉದಾಹರಣೆಗೆ, ಸೂಫಿ ಗೋಪುರಗಳು, ದೇವಾಲಯಗಳು ಮತ್ತು ಚರ್ಚ್ ಗಳ ಮೇಲಿನ ಹತ್ಯಾಕಾಂಡದ ದಾಳಿಗಳು ಶಿರ್ಕ್ ಮತ್ತು ಕುಫ್ರ್‌ಗಳನ್ನು ಇಡೀ ಪ್ರಪಂಚದಿಂದ ಹೊರಹಾಕುವ ವರ್ಗಕ್ಕೆ ಬರುತ್ತವೆ. ಇಂದಿನ ಜಿಹಾದಿಗಳು ಚಂದಾದಾರರಾಗಿರುವ ಸಲಾಫಿ-ವಹಾಬಿ ಧರ್ಮಶಾಸ್ತ್ರದಲ್ಲಿ, ಸೂಫಿ ದೇವಾಲಯಗಳು ಸಹ ಶಿರ್ಕ್ ಅನ್ನು ಉತ್ತೇಜಿಸಬೇಕೆಂದು ಹೇಳಲಾಗಿದೆ.
ಒತ್ತು(ಮಹತ್ವ) ನೀಡುವಲ್ಲಿ ಜಿಹಾದಿ ಧರ್ಮಶಾಸ್ತ್ರ ಮತ್ತು ಶಾಸ್ತ್ರೀಯ ಧರ್ಮಶಾಸ್ತ್ರದಲ್ಲಿ ಮಾತ್ರವಲ್ಲದೆ ಜಿಹಾದಿ ಗುಂಪುಗಳಲ್ಲಿ ಸಹ ಕೆಲವು ವ್ಯತ್ಯಾಸಗಳಿವೆ. ಉದಾಹರಣೆಗೆ, ಹದೀತ್ ನಲ್ಲಿ ಕಂಡುಬರುವ ಪೈಗಂಬರರ ಭವಿಷ್ಯವಾಣಿಯ ಆಧಾರದ ಮೇಲೆ ಅಂತಿಮ ಸಮಯದ ಸಹಸ್ರಮಾನ(ಧರ್ಮರಾಜ್ಯ)ಕ್ಕೆ ಐಸಿಸ್ ನ ಹೆಚ್ಚಿನ ಒತ್ತು. ಯುವಕರು ಇದನ್ನು ಬಹಳ ಇಷ್ಟಪಡುತ್ತಾರೆ.ಮತ್ತೊಂದೆಡೆ, ಅಲ್-ಕಾಯದಾ ಅದಕ್ಕೆಹೆಚ್ಚು ಮಹತ್ವ ಕೊಡುವುದಿಲ್ಲ, ಆದರೂ ಅದರ ಶೂರಾದ (ನಾಯಕತ್ವ ಸಲಹಾ ಮಂಡಳಿ) ಕನಿಷ್ಠ ಇಬ್ಬರು ಸದಸ್ಯರು ಇಸ್ಲಾಮಿಕ್ ಅಂತಿಮಗತಿಶಾಸ್ತ್ರ(ಎಸ್ಕಾಟಾಲಜಿ)ವನ್ನಾಧಾರಿತ ಸಹಸ್ತ್ರಮಾನ ಪ್ರಪಂಚದ ಸನ್ನಿಹಿತ ಅಂತ್ಯ ಮತ್ತು ನಂತರದ ಸಾಮಾನ್ಯ ಪುನರುತ್ಥಾನ ಮತ್ತು ಅಂತಿಮ ತೀರ್ಪಿನ ಕುರಿತಾದ ಒಂದು ಸಿದ್ಧಾಂತ(ಅಪೋಕ್ಯಾಲಿಪ್ಟಿಸಮ್)ವನ್ನು ನಂಬಿದ್ದರು ಎಂದು ಹೇಳಲಾಗುತ್ತದೆ. 
ಶಾಸ್ತ್ರೀಯ ಧರ್ಮಶಾಸ್ತ್ರಜ್ಞರಲ್ಲಿ ಸಹ ಯಾರೊಬ್ಬರೂ ಅಹದೀತ್ (ಹದೀತ್ ನ ಬಹುವಚನ)ಸಿಂಧುತ್ವವನ್ನು ವಿವಾದಿಸುವುದಿಲ್ಲ ನಿಜ,ಪೈಗಂಬರ (ಪಿ.ಬಿ.ಯು)ರ ಹೇಳಿಕೆಗಳೆಂದು ಕರೆಯಲ್ಪಡುವ ಪೈಗಂಬರರ (ಪಿ.ಬಿ.ಯು) ಮಾತುಗಳು ಈಗಾಗಲೇಸತ್ಯವಾಗಿವೆ ಎಂದುಜಿಹಾದಿಗಳು ತಮ್ಮ ತತ್ವಗಳಿಗೆ ಆಧಾರವಾಗಿ ಉಲ್ಲೇಖಿಸುತ್ತಾರೆ,
ಆದ್ದರಿಂದಯಾಜೂಜ್ - ಮಜೂಜ್ (ಗಾಗ್-ಮಾಗೋಗ್), ಇಮಾಮ್ ಮಹ್ದಿ, ಮಾಸಿಹ್ ದಜ್ಜಲ್ (ಕ್ರೈಸ್ತರಿಗೆ ಕ್ರಿಸ್ತ ವಿರೋಧಿ) ಮತ್ತು ಪೈಗಂಬರ ಯೇಸುಕ್ರಿಸ್ತ(ಪಿ.ಬಿ.ಯು) ನ ಅವತರಿಕೆಯಿಂದ. ಸ್ವತಃ ಆರ್ಮಗೆಡ್ಡಾನ್ ಮತ್ತು ಕಯಾಮತ್, ತೀರ್ಪಿನ ದಿನ ಜಗತ್ತು ಅಂತ್ಯಗೊಳ್ಳುವ ಕೆಲವೇ ವರ್ಷಗಳು ಅಥವಾ ದಶಕಗಳ ವಿಷಯವಾಗಿರಬಹುದು.
ಈ ಅಹದೀತ್‌ ನ ವಿವಿಧ ಪುಸ್ತಕಗಳಲ್ಲಿ ಪ್ರತಿಪಾದಿಸಿದಂತೆ ಕೆಲವು ಹೇಳಿಕೆಗಳು ಮತ್ತು ಪರಿಭಾಷೆಗಳ ಅವು ವಿಭಿನ್ನ ಅರ್ಥ ವಿವರಣೆಯನ್ನು ನೀಡುತ್ತಿದ್ದರೂ, ಈ ಅಹದೀತ್‌ಗಳ ಸತ್ಯಾಸತ್ಯತೆ(ಅಧಿಕೃತತೆ)ಯನ್ನು ಪ್ರಶ್ನಿಸುವ ಉಲೆಮಾಗಳ ಒಂದೇ ಒಂದು ವಿಭಾಗವನ್ನು ಸಹ ನಾನುಕಂಡಿಲ್ಲ.
ಗಮನಾರ್ಹವಾದ ವಿಷಯವೆಂದರೆ, ಘಜ್ವಾ-ಎ-ಹಿಂದ್ (ಮಹಾನ್ ಆಧ್ಯಾತ್ಮಿಕ ಪ್ರತಿಫಲವನ್ನು ತರುವಭಾರತದ ವಿರುದ್ಧದ ಧಾರ್ಮಿಕ ಹೋರಾಟ) ಹೋರಾಡುವ ಕರ್ತವ್ಯದ ಬಗ್ಗೆ ಪಾಕಿಸ್ತಾನದ ಧಾರ್ಮಿಕ ವಲಯಗಳಲ್ಲಿನಡೆಯುವ ಪ್ರಚಾರ ಸಹ ಈ ಹದೀತ ಆಧಾರಿತ ಸಹಸ್ರಮಾನವಾದದೊಂದಿಗೆ ಸಂಬಂಧವನ್ನು ಹೊಂದಿದೆ. ಘಜ್ವಾ-ಎ-ಹಿಂದ್ ಇದುಅಂತಿಮಗತಿಶಾಸ್ತ್ರವನ್ನು ಆಧರಿಸಿದ ಸಹಸ್ರಮಾನದ ಒಂದು ಅಂಗವಾಗಿದೆ. ಇದು ಭೂಮಿಯ ಮೇಲಿನ ಕಾಲಗತಿಯ ಅಂತ್ಯದ ಚಿಹ್ನೆಗಳಲ್ಲಿ ಒಂದಾಗಿದೆ ಎಂದು ಹೇಳಲಾಗುತ್ತದೆ. ಜನಪ್ರಿಯ ಮತ್ತು ಪೂಜ್ಯ ಪಾಕಿಸ್ತಾನಿ ವಿದ್ವಾಂಸರು, ಧಾರ್ಮಿಕ ಮನಸ್ಸಿನ ಪಾಕಿಸ್ತಾನಿಗಳ ಪ್ರಜ್ಞೆಯಲ್ಲಿ ಅವರು ಭಾರತವನ್ನು ವಶಪಡಿಸಿಕೊಳ್ಳಲು ಘಜ್ವಾ ಇ ಹಿಂದ್‌ನಲ್ಲಿ ತೊಡಗಿಸಿಕೊಳ್ಳಬೇಕು ಮತ್ತು ಸಾಧ್ಯವಾದಷ್ಟು ಹೆಚ್ಚಿನ ದೈವಿಕ ಪ್ರತಿಫಲಗಳನ್ನು ಗಳಿಸಲು ಆ ಭೂಮಿಯಿಂದ ಶಿರ್ಕ್ ಅನ್ನು ತೊಡೆದುಹಾಕಬೇಕೆಂಬುದನ್ನು ಬಿಂಬಿಸಲುಈ ವಿಷಯವನ್ನು ಪದೇ ಪದೇ ಬರೆಯುತ್ತಾರೆ ಮತ್ತು ಹೇಳುತ್ತಾರೆ.
ಘಜ್ವಾ ಎ ಹಿಂದ್ ಮತ್ತು ಇತರ ಸಹಸ್ತ್ರಕ ಪ್ರವಾದನೆಗಳ ಪರಿಕಲ್ಪನೆಯ ಆಧಾರವಾದ ಅಹದೀತ್ ಹೆಚ್ಚು ವಿವಾದಾಸ್ಪದವಾಗಿದೆ. ಆದರೆ ಉಲೇಮಾಗಳು ಬಹುತೇಕ ಸರ್ವಾನುಮತದಿಂದ ಹದೀತ್ ಅನ್ನು ವಾಹಿ (ಅಂತರ್ಜ್ಞಾನ) ಎಂದು ಕರೆಯುತ್ತಾರೆ, ಪೈಗಂಬರರ ನಿಧನದ ನಂತರ ಮೂರು ಶತಮಾನಗಳವರೆಗೆ ಅಹಾದಿತ್ ಗಳು ಸುದೀರ್ಘ ನಿರೂಪಣೆಗಳೊಂದಿಗೆ ಬರವಣಿಗೆಯಲ್ಲಿ ದಾಖಲಿಸಲ್ಪಟ್ಟಿದ್ದರೂ ಸಹ ಇದು ಸ್ವತಃ ಪವಿತ್ರವಾದ ಕುರಾನ್ ದಷ್ಟೇ ಪೂಜನೀಯವಾಗಿದೆ. 9 ನೇ ಶತಮಾನದ ಇಮಾಮ್ ಬುಖಾರಿ, ಇಮಾಮ್ ಮುಸ್ಲಿಂ, ಇಬ್ನ್ ಮಾಜಾ, ತಿರ್ಮಿಝಿ, ಅಲ್ ನಸಾಯಿ, ಅಬು ದಾವುದ್ ರಂತಹಮುಹದ್ದೀತೀನ್ (ಹದೀತ್ ಸಂಗ್ರಹಕಾರರು, ಸಂಪ್ರದಾಯವಾದಿಗಳು)ಗಳಅತ್ಯುತ್ತಮ ಪ್ರಯತ್ನಗಳ ಹೊರತಾಗಿಯೂ ಈ ಸರಪಳಿಗಳನ್ನು ಶತಮಾನಗಳ ನಂತರ ಸಹ ಪ್ರಮಾಣೀಕರಿಸಲು ಸಾಧ್ಯವಾಗಲಿಲ್ಲ. ಮುಹದ್ದಿತೀನ್ ಅವರು ಅಹದೀತ್ ಅನ್ನು ಪರಿಶೀಲಿಸಲು ರೂಪಿಸಿದ ನಿಯಮಗಳನ್ನು ಅನುಸರಿಸಿ ವಿವಿಧ ಹಂತದ ಪ್ರಮಾಣೀಕರಣಕ್ಕೆ ವರ್ಗೀಕರಿಸಿದ್ದಾರೆ. ಅತ್ಯಂತ ಅಧಿಕೃತವಾದಸಾಹಿಹ್ತೊಹಸನ್, ದಾಇಎಫ್, ಮಾವುದು, ಮಕ್ಲೂಬ್ಈ ವರ್ಗಗಳಲ್ಲಿಯ ಕೆಲವು ವರ್ಗಗಳಾಗಿವೆ. ಮುಹದ್ದೀತ್ ರಲ್ಲಿ ಅಗ್ರಗಣ್ಯರಾದ ಇಮಾಮ್ ಬುಖಾರಿ (ಕ್ರಿ.ಶ. 810 ರಿಂದ 870) ಚಲಾವಣೆಯಲ್ಲಿರುವ 6,00,000ರಲ್ಲಿ 300,000 ಕ್ಕೂ ಹೆಚ್ಚು ಅಹದೀತ್‌ಗಳನ್ನು ಸಂಗ್ರಹಿಸಿದ್ದಾರೆಂದು ಹೇಳಲಾಗುತ್ತದೆ ಮತ್ತು ಅವರ ಸಹೀಹ್‌ (ಅಧಿಕೃತ ಅಹದೀತ್ ಪುಸ್ತಕ)ನಲ್ಲಿ ಕೇವಲ 2,602 ಸಂಪ್ರದಾಯಗಳನ್ನು ಮಾತ್ರ ಸೇರಿಸಿದ್ದಾರೆ.
ಕೆಲವು ಸಂಗತಿಗಳು ಅಹದೀತ್ ಸಂಸ್ಥೆಯ ನೈಜ ಸ್ಥಿತಿಯನ್ನು ಮತ್ತಷ್ಟು ವಿವರಿಸುತ್ತದೆ. ಒಟ್ಟು 600,000 ಅಹದೀತ್ ಅಸ್ತಿತ್ವದಲ್ಲಿದ್ದು, ಅದರಲ್ಲಿ 408,324 ಅಹದಿತ್‌ಗಳನ್ನು ಹೆಸರುಗಳು ಮತ್ತು ಗುರುತು ತಿಳಿದ 620ನಕಲುಕಾರರು ರಚಿಸಿದ್ದಾರೆಂದು ತಿಳಿದುಬಂದಿದೆ. (ಅಲ್-ಘದೀರ್, ಅಲ್-ಅಮಿನಿ, ಸಂಪುಟ 5, ಪುಟ 245.)ಇವರಲ್ಲಿ ಕೆಲವು ನಕಲುಕಾರರ ಹೆಸರು: ಇಬ್ನ್ ಜುಂದುಬ್, ಅಬು ಬುಖ್ತಾರಿ, ಇಬ್ನ್ ಬಶೀರ್, ಅಬ್ದುಲ್ಲಾ ಅಲ್-ಅನ್ಸಾರಿ, ಅಲ್-ಸಿಂದಿ. ಅವರಲ್ಲಿ ಒಬ್ಬನಾದಇಬ್ನ್ ಔಜಾ, ಅವನನ್ನು ಗಲ್ಲಿಗೇರಿಸುವ ಮೊದಲು (ಅವನ ಧರ್ಮದ್ರೋಹಕ್ಕಾಗಿ) ತಾನೇ4,000 ಹದೀತ್ ಗಳನ್ನು ನಕಲಿ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ. (ಮಿಶ್ಕಾತ್ ಅಲ್-ಮಸಬೀಹ್, ಫಜಲುಲ್ ಕರೀಮ್ ಅವರ ಅನುವಾದ, ಸಂಪುಟ 1, ಪುಟ 17-20).
ಹೀಗಿದ್ದರೂ ಯಾವುದರ ಆಕರ್ಷಣೆ ನಮ್ಮ ಯುವಕರಿಗೆ ಎಷ್ಟು ಇದೆ ಎಂದರೆ ಅವರು ಭಾರತ ಸೇರಿದಂತೆ ವಿಶ್ವದಾದ್ಯಂತದ ಸಾವಿರಾರು ಸಂಖ್ಯೆಯಲ್ಲಿ ಬಾಗ್ದಾದಿಯ ಕ್ರೂರ ಯುದ್ಧ ಯಂತ್ರಕ್ಕೆ ಸೇರುತ್ತಾರೆ, ಅಂಥ ಕಾಲಮಿತಿ(ಅಪೋಕ್ಯಾಲಿಪ್ಟಿಕ್) ಸಹಸ್ತ್ರಕ ಪ್ರಬಂಧವನ್ನು ಪ್ರಸ್ತುತಪಡಿಸುವ ಅಹದೀತ್‌ ನ ಸತ್ಯಾಸತ್ಯತೆಯ ಬಗ್ಗೆ ಉಲೇಮಾ ಯಾವುದೇ ಸಂದೇಹವನ್ನು ವ್ಯಕ್ತಪಡಿಸುವುದಿಲ್ಲ,. ಅವರು ಈ ಅಹದೀತ್‌ಗಳನ್ನುಕೇವಲ ತಮ್ಮ ಆದ್ಯತೆಗಳಿಗೆ ಅನುಗುಣವಾಗಿ ವ್ಯಾಖ್ಯಾನಿಸಲು ಪ್ರಯತ್ನಿಸುತ್ತಾರೆ.
ಪೈಗಂಬರರು ಹೇಳಲಾದ ಮುನ್ಸೂಚನೆಗಳಲ್ಲಿ ಅನೇಕವು ಯಾವುದೇ ಯುಗದಲ್ಲಿ ನಿಜವೆಂದು ಹೇಳಿಕೊಳ್ಳಬಹುದಂತಿವೆ.ಹದೀತ್ ನಿರೂಪಣೆಯ ಪ್ರಕಾರ, ಪೈಗಂಬರ ಸ್ವತಃ ಮಾಸಿಹ್ ದಜ್ಜಲ್ (ಕ್ರೈಸ್ತ ವಿರೋಧಿ, ಕ್ರಿಶ್ಚಿಯನ್ನರಿಗೆ) ಯ ಫಿಟ್ನಾ (ಕಿಡಿಗೇಡಿತನ) ಗೆ ಹೆದರುತ್ತಿದ್ದರು ಮತ್ತು ಪ್ರತಿ ಪ್ರಾರ್ಥನೆಯಲ್ಲೂ ದೇವರಲ್ಲಿ ಅವರಿಂದ ರಕ್ಷಣೆಯನ್ನುಕೋರುತ್ತಿದ್ದರೆಂದು ಹೇಳಲಾಗಿದೆ. ಹಾನಿಗೊಳಗಾದ ಕಣ್ಣಿನಿಂದ ವಿರೂಪಗೊಂಡ ಮಗು ಜನಿಸಿದ ಯಾವುದೇ ಮನೆಗೆ ಅವನು ಆ ಮಗು ತಾನು ಭಯಪಡುವ ದಜ್ಜಲ್ ಆಗಿ ಬದಲಾಗಬಹುದಾದ ಯಾವುದೇ ಚಿಹ್ನೆಗಳನ್ನು ಪ್ರದರ್ಶಿಸುತ್ತದೆಯೇ ಎಂದು ಸ್ವತಃ ಪರೀಕ್ಷಿಸಲು ಭೇಟಿ ನೀಡುತ್ತಿದ್ದನು (ದಜ್ಜಲ್ ಒಕ್ಕಣ್ಣಿನವನು ಎಂದು ಹೇಳಲಾಗುತ್ತದೆ).
ಆದ್ದರಿಂದ, ವಿಶ್ವದ ಕಾಲಮಿತಿ(ಅಪೋಕ್ಯಾಲಿಪ್ಟಿಕ್) ಅಂತ್ಯದ ಮುಸ್ಲಿಂ ಆವೃತ್ತಿಯ ಕಾಯುವಿಕೆ 1400ಗಳಿಗಿಂತಹೆಚ್ಚು ವರ್ಷಗಳಿಂದ ನಡೆಯುತ್ತಿದೆ. ಈ ಸನ್ನಿವೇಶದಲ್ಲಿ ಬಗ್ದಾದಿ ಮಧ್ಯಪ್ರಾಚ್ಯ ಮತ್ತು ಮಧ್ಯ ಏಷ್ಯಾದ ವಿವಿಧ ಭಾಗಗಳಲ್ಲಿ ಯುದ್ಧಗಳು ನಡೆಯುತ್ತಿದ್ದುದರಿಂದ ಪೈಗಂಬರ(ಪಿಬಿಯುಎಚ್) ರು ನುಡಿದಭವಿಷ್ಯದಂತೆ ಕಾಲಮಿತಿಯ ಅಂತ್ಯವು ಹತ್ತಿರದಲ್ಲಿದೆ ಮತ್ತು ಮಾಸಿಹ್ ದಜ್ಜಲ್ ಮತ್ತು ಇಮಾಮ್ ಮಹ್ದಿ ಶೀಘ್ರದಲ್ಲೇ ಅವತರಿಸಲಿದ್ದಾರೆ ಎಂದುಸರಿಯಾಗಿ ತೋರುವ ವಾದವನ್ನೇಮಾಡಿದರು. ಇತ್ತೀಚೆಗೆ ನಡೆದಂತೆ ಉಲೇಮಾದಿಂದ ಪೋಷಿಸಲ್ಪಟ್ಟ ಅಹದಿತ್‌ನಲ್ಲಿ ಆಳವಾದ ನಂಬಿಕೆಯಿರುವ ಅನೇಕ ಮುಸ್ಲಿಮರು ಅದರೆಡೆಗೆ ಆಕರ್ಷಿತರಾಗುತ್ತಾರೆ.
ಅದೇ ರೀತಿಯಾಗಿ, ದೇವರಂತೆ ಕುರಾನ್ ಸಹ ಸ್ವಯಂಭೂ ಆಗಿದೆ (ಯಾರಿಂದಲೂ ರಚಿಸಲ್ಪಟ್ಟಿಲ್ಲ) ಎಂದು ಜಗತ್ತಿನ ಪ್ರತಿಯೊಂದು ಮದರಸೆಯಲ್ಲಿ ಕಲಿಸಲಾಗುತ್ತದೆ. ಇದರ ಅರ್ಥವೇನೆಂದರೆ, ಕುರಾನ್‌ನ ಯಾವುದೇ ವಚನಗಳ ಸಾರ್ವತ್ರಿಕತೆಯನ್ನು ಪ್ರಶ್ನಿಸಲಾಗುವುದಿಲ್ಲ, ಅವೆಲ್ಲವನ್ನೂ ಕೊನೆಯವರೆಗೂ ಅನುಸರಿಸಬೇಕು ಮತ್ತು ಪ್ರತಿಯೊಂದು ಸೂಚನೆಯೂ ಮುಸ್ಲಿಮರಿಗೆ ಸದಾಕಾಲಕ್ಕಾಗಿ ಅನ್ವಯವಾಗುತ್ತದೆ. ಹೀಗಿರುವಾಗ, ಜಿಹಾದಿಗಳು ತಮ್ಮ ಕಾರ್ಯಗಳನ್ನು ಸಮರ್ಥಿಸಿಕೊಳ್ಳಲು ಸೂರಾ ತವ್ಬಾ, ಸೂರಾ ಅನ್ಫಾಲ್ ಮತ್ತು ಇತರ ಅನೇಕ ಖುರಾನಿನ ಉಗ್ರಗಾಮಿ, ಯುದ್ಧ-ಸಮಯದ ಪದ್ಯಗಳನ್ನು ಉಲ್ಲೇಖಿಸಿದಾಗ ಅವರ ಉದ್ದೇಶಗಳನ್ನು ಹೇಗೆ ಪ್ರಶ್ನಿಸಬಹುದು?.
ಪ್ರತಿ ಯುದ್ಧದಲ್ಲೂ ಪೈಗಂಬರ (ಪಿಬಿಯುಎಚ್)ರು ಹೇಳಿದ್ದೆಂದು ಅವರ ಮೇಲೆ ಹೇರಲ್ಪಟ್ಟಂತೆ, ಎದುರಾಳಿಯನ್ನು ಕೊಲ್ಲಲು ಆದೇಶ ನೀಡಲಾಗುತ್ತದೆ. ಆದರೆ ಯುದ್ಧ ಮುಗಿದ ನಂತರ ಈ ಆದೇಶಗಳು ಅನ್ವಯವಾಗುವುದಿಲ್ಲ. ಆದರೆ ಸ್ವತಃ ದೇವರಂತೆ ಸ್ವಯಂಭೂ(ಯಾರಿಂದಲೂ ರಚಿಸಲ್ಪಡದ)ವಾದ ಎಂದು ಪರಿಗಣಿಸಲ್ಪಟ್ಟ ಪುಸ್ತಕದಲ್ಲಿ ಆದೇಶವನ್ನು ಬರೆಯಲಾಗಿದ್ದರೆ ಮಾತ್ರ ಹಾಗಿಲ್ಲ. ಆಗ ಯಾವ ಸೂಚನೆಯು ಸಾರ್ವತ್ರಿಕವಾಗಿದೆ ಮತ್ತು ಅದು ಇನ್ನು ಮುಂದೆ ಅನ್ವಯವಾಗುವುದಿಲ್ಲ ಎಂಬ ಪ್ರಶ್ನೆಯೇ ಇಲ್ಲ.ಭಯೋತ್ಪಾದನೆಯ ವಿರುದ್ಧ 600 ಪುಟಗಳ ಫತ್ವಾ ಪುಸ್ತಕವನ್ನು ಬರೆದಿರುವ ಮೌಲಾನಾ ತಾಹಿರುಲ್ ಖಾದ್ರಿ ಅವರನ್ನು, ಮುಶ್ರಿಕ (ಬಹುದೇವತಾವಾದಿಗಳು, ವಿಗ್ರಹಾರಾಧಕರು) ರನ್ನು ಕೊಲ್ಲಲು ಮುಸ್ಲಿಮರಿಗೆ ಸೂಚಿಸುವ ಖುರಾನಿನ ಯುದ್ಧ-ಸಮಯದ ಪದ್ಯಗಳು ಮುಸ್ಲಿಮರಿಗೆ ಇನ್ನೂ ಅನ್ವಯವಾಗುತ್ತವೆಯೇ ಎಂದು ನಾನು ಕೇಳಿದಾಗ ಅವರು ಹೌದು , ಎಲ್ಲ ಪದ್ಯಗಳು ಎಂದೆಂದಿಗೂ ಅನ್ವಯವಾಗುತ್ತವೆ ಎಂದರು.
ಮುಸ್ಲಿಮರು ಮಕ್ಕಾದಲ್ಲಿ ಇಸ್ಲಾಂ ಧರ್ಮದ ಆರಂಭಿಕ ವರ್ಷಗಳಲ್ಲಿಯಂತೆ ಕಿರುಕುಳವನ್ನು ಎದುರಿಸುತ್ತಿರುವಾಗಲೂ, ಪ್ರತಿಕೂಲ ಸಮಯದಲ್ಲಿ ಬಹುತ್ವ, ಸಹಬಾಳ್ವೆ, ಶಾಂತಿ ಮತ್ತು ಪರಿಶ್ರಮವನ್ನು ಕಲಿಸುವ ಅನೇಕ ವಚನಗಳನ್ನು ಕುರಾನ್ ಒಳಗೊಂಡಿದೆ. ಜಿಹಾದಿ ಧರ್ಮಶಾಸ್ತ್ರದ ವಾಕ್ಚಾತುರ್ಯದ ಖಂಡನೆಯಲ್ಲಿ ಈ ಪದ್ಯಗಳನ್ನು ಉಲೆಮಾ ಉಲ್ಲೇಖಿಸಿದ್ದಾರೆ. ಆದರೆ ಮದರಸಾಗಳಲ್ಲಿ ಮತ್ತು ಜಿಹಾದಿ ಸಾಹಿತ್ಯದಲ್ಲಿ ಕಲಿಸಲಾದ ಶಾಸ್ತ್ರೀಯ ಧರ್ಮಶಾಸ್ತ್ರದ ಪುಸ್ತಕಗಳು ಮುಸ್ಲಿಮರು ಬಹುದೇವತಾವಾದಿಗಳನ್ನು ಕೊಂದು ಯಹೂದಿಗಳು ಮತ್ತು ಕ್ರಿಶ್ಚಿಯನ್ನರನ್ನು ನಿಗ್ರಹಿಸಬೇಕೆಂದು ಕೇಳಿಕೊಳ್ಳುವ ಸೂರಾ ತವ್ಬಾದಲ್ಲಿನ ಕತ್ತಿ ಪದ್ಯಗಳಿಂದ ಶಾಂತಿಯ ಈ ಆರಂಭಿಕ ಪದ್ಯಗಳನ್ನು ರದ್ದುಪಡಿಸಲಾಗಿದೆ ಎಂದು ಹೇಳುತ್ತವೆ. ಸೂರಾ ತವ್ಬಾ ಪೈಗಂಬರರ ವೃತ್ತಿಜೀವನದ ಕೊನೆಯಲ್ಲಿ ಬಂದಿವೆ ಮತ್ತು ಆದ್ದರಿಂದ ದೇವರ ಅಂತಿಮ ಸೂಚನೆ ಎಂದು ಅವುಗಳನ್ನು ಪರಿಗಣಿಸಬೇಕು, ನಾಸ್ತಿಕರನ್ನು ಹೇಗೆ ಎದುರಿಸಬೇಕು ಎಂಬುದರ ಕುರಿತು ಹಿಂದಿನ ಎಲ್ಲಾ ಸೂಚನೆಗಳನ್ನು ಅವು ರದ್ದುಪಡಿಸುತ್ತವೆ ಎಂಬ ವಾದವಿದೆ.
ಅವರ ವಾದವೆಂದರೆ, ನಂತರ ನೀಡಲಾದ ಹೋರಾಟದ ಸೂಚನೆಗಳು ಮೊದಲು ಮುಸ್ಲಿಮರು ದುರ್ಬಲ ಸ್ಥಿತಿಯಲ್ಲಿದ್ದಾಗ, ಹೋರಾಡಲು ಸಾಧ್ಯವಾಗದಿದ್ದಾಗ ಅವರಿಗೆ ನೀಡಲಾದ ಕಿರುಕುಳದ ಸಂದರ್ಭದಲ್ಲಿಯ ತಾಳ್ಮೆಯ ಸೂಚನೆಗಳನ್ನು ಹೊಡೆದು ಹಾಕಿವೆ. ಜಿಹಾದಿ ವಿಚಾರವಾದಿಗಳು ಮತ್ತು ನಮ್ಮ ಹೆಚ್ಚಿನ ಧರ್ಮಗುರುಗಳು ರದ್ದುಗೊಳಿಸುವಿಕೆ(ಅಬ್ ರೋಗೇಶನ್)ಯ ಸಿದ್ಧಾಂತಕ್ಕೆ ಸಂಬಂಧಿಸಿದಂತೆ ಒಪ್ಪುತ್ತಾರೆ.
ಇಸ್ಲಾಮಿಕ್ ಸಿದ್ಧಾಂತಗಳ ಬಗ್ಗೆ ಇಂತಹ ತಿಳುವಳಿಕೆಯನ್ನು ಹೊಂದಿರುವ ಮೌಲವಿಗಳು ಯಾವುದೇ ಮಟ್ಟದ ಅಧಿಕಾರದಿಂದ ಜಿಹಾದಿಗಳನ್ನು ಪ್ರಶ್ನಿಸಲು ಸಾಧ್ಯವಿಲ್ಲ. ನಮ್ಮ ಯುವಕರು ಈ ಮೌಲವಿಗಳನ್ನು ಕಪಟಿಗಳು ಎಂದು ಕರೆಯುವುದರಲ್ಲಿ ಆಶ್ಚರ್ಯವಿಲ್ಲ. ನಮ್ಮ ಯುವಕರು ವಿದ್ಯಾವಂತರು, ಪ್ರಾಮಾಣಿಕರು ಮತ್ತು ನಿಷ್ಕಪಟಿಗಳಾಗಿದ್ದಾರೆ. ಅವರಲ್ಲಿ ಎಲ್ಲರೂ ಸಹಜವಾಗಿ, ಜಿಹಾದಿಗಳೊಂದಿಗೆ ಕೈಜೋಡಿಸುವುದಿಲ್ಲ ಆದರೆ ಅವರಲ್ಲಿ ಅನೇಕರು ಉಲೇಮಾ ಅವರ ಬೂಟಾಟಿಕೆಯನ್ನು ಬಹಿರಂಗಪಡಿಸುವ ಮೂಲಕ ತಮ್ಮ ಜೀವನ ಮತ್ತು ವೃತ್ತಿಜೀವನವನ್ನು ದಾಳಕ್ಕೆ ಹಚ್ಚಿ ಅಭ್ಯಾಸ ಮಾಡುತ್ತಿರುವ ವ್ಯಕ್ತಿಯನ್ನು ಧರ್ಮಗುರುಗಳು ಏನು ಬೋಧಿಸುತ್ತಿದ್ದಾರೆಂದು ಖಂಡಿಸುತ್ತಾರೆ.ಅವರಲ್ಲಿ ಕೆಲವರು, ಭಾಗಶಃ ಈ ಬೂಟಾಟಿಕೆಗೆ ಪ್ರತಿಕ್ರಿಯೆಯಾಗಿ, ಮತ್ತು ಮುಖ್ಯವಾಗಿ ಆನ್‌ಲೈನ್ ಅಥವಾ ಆಫ್‌ಲೈನ್‌ನಲ್ಲಿ ಅವರಿಗೆ ಕಲಿಸಿದದನ್ನು ಆಚರಿಸಲುಇನ್ನೊಂದು ಬದಿಗೆ ಹೋಗುವುದರಲ್ಲಿ ಆಶ್ಚರ್ಯವಿಲ್ಲ.
ಮುತಾಜಲ್ಲಾ ಎಂದು ಕರೆಯಲ್ಪಡುವ ವಿಚಾರವಾದಿ ಧರ್ಮಶಾಸ್ತ್ರಜ್ಞರು ಕ್ರಿಶ್ಚಿಯನ್ ಯುಗದ ಒಂಬತ್ತನೇ ಶತಮಾನದ ಮಧ್ಯಭಾಗ ಅಥವಾ ಎರಡನೆಯಹಿಜ್ರಿ ಶತಮಾನದವರೆಗೆ ಕುರಾನ್ ದೇವರ ಸೃಷ್ಟಿಯಾಗಿದೆ ಎಂಬ ತಮ್ಮಸಿದ್ಧಾಂತವನ್ನು ಕಾರ್ಯರೂಪಕ್ಕೆ ತರಲು ಮತ್ತು ಪ್ರಚಾರ ಮಾಡಲು ಅವಕಾಶ ನೀಡಲಾಯಿತು. ಆದರೆ ಅಂದಿನಿಂದ ಸಾಂಪ್ರದಾಯಿಕ ಮೌಲವಿಗಳು ಶಾಸ್ತ್ರೀಯ ಧರ್ಮಶಾಸ್ತ್ರಜ್ಞರ ಇಜ್ತಿಹಾದ್ ಬೋಧನೆಗಳ (ಬದಲಾಗುತ್ತಿರುವ ಸಂದರ್ಭಗಳಿಗೆ ಹೊಂದಿಕೊಳ್ಳಲು ಧಾರ್ಮಿಕ ಒಪ್ಪಿಗೆಗಳ ಸೃಜನಶೀಲ ಪುನರ್ವಿಮರ್ಶೆ) ಬದಲಿಗೆ ದೇವರು-ಆದೇಶಿಸಿದ ಕುರುಡು ತಕ್ಲಿದ್ (ಪ್ರಶ್ನಾತೀತ ಸ್ವೀಕೃತಿ) ನೀತಿಯನ್ನೇ ಆಳಿದ್ದಾರೆ ಮತ್ತು ಅನುಸರಿಸಿದ್ದಾರೆ. ಇಜ್ತಿಹಾದ್‌ನ ಬಾಗಿಲುಗಳನ್ನು ಸುಮಾರು ಸಹಸ್ರಮಾನಗಳಿಂದ ಮುಚ್ಚಲಾಗಿದೆ.
ನಾಲ್ಕು ಶತಮಾನಗಳವರೆಗೆ ಒಟ್ಟೊಮನ್ ಸಾಮ್ರಾಜ್ಯದಲ್ಲಿ ನಿಷೇಧಿಸಲ್ಪಟ್ಟ ಮುದ್ರಣಾಲಯವನ್ನು ಆಮದು ಮಾಡಿಕೊಳ್ಳುವುದರಲ್ಲಿ ಮೌಲವಿಗಳ ಈ ಪ್ರಾಬಲ್ಯದ ಅತ್ಯಂತ ವಿನಾಶಕಾರಿ ಫಲಿತಾಂಶವು ಕಂಡುಬಂದಿದೆ. ಯುರೋಪದಲ್ಲಿ ಅಭಿವೃದ್ಧಿಪಡಿಸಲ್ಪಟ್ಟಿರುವದರಿಂದ ಮುದ್ರಣಾಲಯವು ದೆವ್ವದ ಆವಿಷ್ಕಾರವಾಗಿದೆ ಎಂದು ಉಲೆಮಾ ಹೇಳಿದರು. ಇದು ವಾದಾತೀತವಾಗಿ ಇಂದಿಗೂ ಮುಂದುವರೆದಿರುವ ಮುಸ್ಲಿಮರಲ್ಲಿಯ ಬೌದ್ಧಿಕ ಹಿಂದುಳಿದಿರುವಿಕೆಗೆ ಕಾರಣವಾಗಿದೆ. ವಿಷಯಗಳು ಇಂದಿಗೂ ಹೆಚ್ಚು ಬದಲಾಗಿಲ್ಲ. ದಿಯೋಬಂದ್ ಎಂಬ ದಕ್ಷಿಣ ಏಷ್ಯಾದ ಅತ್ಯಂತ ಪ್ರಭಾವಶಾಲಿ ಮದರಸಾ ಸರಪಳಿ, ಇತ್ತೀಚೆಗೆ ಮತ್ತು ಅತ್ಯಂತ ಒಲ್ಲದ ಮನಸ್ಸಿನಿಂದಇಸ್ಲಾಮಿಕ್ ದವಾಹ್ ಉದ್ದೇಶಗಳಿಗಾಗಿ, ಇಸ್ಲಾಂ ಧರ್ಮವನ್ನು ಸ್ವೀಕರಿಸಲು ಇತರರಿಗೆ ಆಹ್ವಾನವನ್ನು ನೀಡುವುದಕ್ಕಾಗಿ ಮಾತ್ರಅಂತರ್ಜಾಲದ ಬಳಕೆಯನ್ನು ಅನುಮತಿಸಿದೆ.
ಸ್ಪಷ್ಟವಾಗಿ, ಮೌಲವಿಗಳು ಈಗ ಶತಮಾನಗಳಿಂದ ಮುಸ್ಲಿಮರು ಎದುರಿಸುತ್ತಿರುವ ಸಮಸ್ಯೆಯ ಭಾಗವಾಗಿದ್ದಾರೆ.ಜಿಹಾದಿ ಉಗ್ರಗಾಮಿತ್ವವು ಸಹ ಮದರಸಾಗಳಲ್ಲಿ ಅವರು ಬೋಧಿಸುತ್ತಿದ್ದ ಹಿಂಸೆ ಮತ್ತು ಪ್ರಾಬಲ್ಯದ ಧರ್ಮಶಾಸ್ತ್ರದ ಉಪ-ಉತ್ಪನ್ನವೇ ಆಗಿದೆ. ಈಗ ಅವರು ಇದ್ದಕ್ಕಿದ್ದಂತೆ ಪರಿಹಾರದ ಭಾಗವಾಗಬಹುದೇ? ಅವರು ಹಾಗೆ ಮಾಡಲು ನಿರ್ಧರಿಸಿದರೆ ಅವರು ಖಂಡಿತವಾಗಿಯೂ ಮಾಡಬಹುದು. ಹೇಗೇ ಇದ್ದರೂ, ಸಾಕಷ್ಟು ಆತ್ಮ ಶೋಧನೆ ಮತ್ತು ಇಂದಿನ ವಾಸ್ತವಿಕತೆಗಳ ಬೆಳಕಿನಲ್ಲಿ ಅವರ ಧರ್ಮಶಾಸ್ತ್ರದ ಸ್ಥಾನಗಳ ಬಗ್ಗೆ ವ್ಯವಸ್ಥಿತವಾಗಿ ಪುನರ್ವಿಮರ್ಶೆಯ ಹೊರತು ಇದನ್ನು ಮಾಡಲು ಸಾಧ್ಯವಿಲ್ಲ. ಜಿಹಾದಿಸಂ ಅನ್ನು ಎದುರಿಸಲು, ಅವರು ಜಿಹಾದಿ ಸಾಹಿತ್ಯವನ್ನು ಅಧ್ಯಯನ ಮಾಡಬೇಕಾಗುತ್ತದೆ ಮತ್ತು ತಮ್ಮದೇ ಆದ ಧರ್ಮಶಾಸ್ತ್ರದ ಯಾವ ಭಾಗಗಳನ್ನು ಜಗತ್ತಿನಲ್ಲಿ ಅಪಾಯವನ್ನು ಸೃಷ್ಟಿಸಲು ಜಿಹಾದಿಗಳು ಬಳಸುತ್ತಿದ್ದಾರೆ ಮತ್ತು ಅದನ್ನು ಎದುರಿಸಲು ತಾವು ತಮ್ಮ ಮನೋಭಾವಗಳಲ್ಲಿ ಯಾವ ಹೊಂದಾಣಿಕೆಗಳನ್ನು ಮಾಡಬಹುದು ಎಂಬುದನ್ನು ನೋಡಬೇಕು.
ಮಕಾಸಿದ್ ಅಲ್-ಷಾರಿಯಾ (ಷರಿಯಾದ ಗುರಿಗಳು ಅಥವಾ ಉದ್ದೇಶಗಳು) ಇಸ್ಲಾಮಿಕ್ ಕಾನೂನಿನ ಸಿದ್ಧಾಂತವಾಗಿದೆ, ಇದು ಮತ್ತೊಂದು ಸಂಬಂಧಿತ ಶಾಸ್ತ್ರೀಯ ಸಿದ್ಧಾಂತವಾದಮಾಸಲಾಹಾ (ಕಲ್ಯಾಣ ಅಥವಾ ಸಾರ್ವಜನಿಕ ಹಿತಾಸಕ್ತಿ) ದ ಜೊತೆಗೆ, ಆಧುನಿಕ ಕಾಲದ ಬೇಡಿಕೆಗಳಿಗೆ ಅನುಗುಣವಾಗಿ ಸಮಸ್ಯೆಗಳನ್ನು ಎದುರಿಸುವಲ್ಲಿ ಹೆಚ್ಚಿನ ಮಟ್ಟದ ನಮ್ಯತೆಯನ್ನು ಒದಗಿಸುತ್ತದೆ. ಈ ಹೊಂದಾಣಿಕೆಗಳು ಕ್ರಾಂತಿಕಾರಿಯಾಗಿರಬೇಕು ಮತ್ತು ಧಿಡೀರ್ ಸೂಚನೆಯಂತೆ (ಸ್ವಲ್ಪ ಸಮಯದಲ್ಲಿ) ಮಾಡುವುದು ಸುಲಭವಲ್ಲ ಎಂಬುದನ್ನು ಒಪ್ಪಿಕೊಳ್ಳಬಹುದಾಗಿದೆ. ಜಿಹಾದಿಸಂ ಅನ್ನು ಎದುರಿಸಲು ಕೇಳುವ ಸರ್ಕಾರಗಳು ಇವುಗಳು ಯಾವುದೇ ಪರಿಣಾಮ ಬೀರುವುದಿಲ್ಲ ಎಂಬುದನ್ನು ಗಮನಿಸದೆತಮ್ಮ ಖಾಲಿ ಮತ್ತು ಕಪಟ ವಾಕ್ಚಾತುರ್ಯವನ್ನು ಹರ್ಷಚಿತ್ತದಿಂದ ಒಪ್ಪಿಕೊಂಡಿರುವುದರಿಂದ ಇಲ್ಲಿಯವರೆಗೆ ಈ ದಿಕ್ಕಿನಲ್ಲಿ ಯಾವುದೇ ಕೆಲಸಗಳು ನಡೆದಿಲ್ಲ.
ಜಿಹಾದಿ ಸಾಹಿತ್ಯದ ನನ್ನ ದಶಕಗಳ ಅಧ್ಯಯನದ ಆಧಾರದ ಮೇಲೆ ಮತ್ತು ನಮ್ಮ ಮದರಸಾಗಳಲ್ಲಿ ಕಲಿಸಿದ ಶಾಸ್ತ್ರೀಯ ಧರ್ಮಶಾಸ್ತ್ರದಲ್ಲಿ ಅದರ ಬೇರುಗಳ ಆಧಾರದ ಮೇಲೆ, ಯಾವುದೇ ಪರಿಣಾಮವನ್ನು ಬೀರಲು ಕನಿಷ್ಠ ಈ ಕೆಳಗಿನ ಅಂಶಗಳು ಉಲೆಮಾಗಳ ಪ್ರತಿ-ನಿರೂಪಣೆಯ ಭಾಗವಾಗಿರಬೇಕು. ಅವರು ನಮ್ಮ ಯುವಕರ ಮೇಲೆ ಪ್ರಾಮಾಣಿಕವಾಗಿ ಪ್ರಭಾವ ಬೀರಲು ಬಯಸಿದರೆ ಮತ್ತು ಹೆಚ್ಚಿನ ಆಮೂಲಾಗ್ರೀಕರಣವನ್ನು ತಡೆಯುವಲ್ಲಿ ಸಹಾಯ ಮಾಡಲು,ಅವರುನಾನು ಇಲ್ಲಿ ನಮೂದಿಸುತ್ತಿರುವ ಅಂಶಗಳನ್ನು ವಿಸ್ತಾರವಾಗಿ ವಿವರಿಸಬೇಕು ಮತ್ತು ಧರ್ಮಶಾಸ್ತ್ರದ ಪರಿಭಾಷೆಯಲ್ಲಿ ಅವುಗಳನ್ನು ಮನವರಿಕೆಯಾಗುವಂತೆ ಪ್ರಸ್ತುತಪಡಿಸಬೇಕು.

1.ಜಿಹಾದ್ ಫಿ ಸಬಿಲಿಲ್ಲಾಹ್(ದೇವರ ಹಾದಿಯಲ್ಲಿರುವ ಜಿಹಾದ್ಮೂಲಭೂತವಾಗಿ ದೇವರೆಡೆಗೆ ತಮ್ಮ ಕರ್ತವ್ಯ(ಹುಕೂಕುಲ್ ಅಲ್ಲಾ)ವನ್ನು ಪೂರೈಸುವಲ್ಲಿಒಬ್ಬರ ಸ್ವಂತ ದುಷ್ಟ ಆಲೋಚನೆಗಳು ಮತ್ತು ಮೂಲ ಆಸೆಗಳ ವಿರುದ್ಧ ಆಂತರಿಕವಾದ, ಆಧ್ಯಾತ್ಮಿಕ ಹೋರಾಟವಾಗಿದೆ.ಇದು ಮುಸ್ಲಿಮರು ಎದುರಿಸಬೇಕಾದ ನಿರಂತರ ಹೋರಾಟವಾಗಿದೆ, ಇದರಿಂದ ಅವರ ಮನಸ್ಸು ದೇವರ ಸ್ಮರಣೆಯಿಂದ ದೂರವಾಗುವುದಿಲ್ಲ. ಪ್ರತಿಯೊಂದು ಚಿಂತನ ಶಾಲೆಯು ಜಿಹಾದ್ ಫಿ ಸಬಿಲಿಲ್ಲಾಹ್ವನ್ನು ಇಸ್ಲಾಂ ಧರ್ಮದ ಸಂದೇಶವನ್ನು ಪ್ರಚಾರ ಮಾಡುವುದು ಮತ್ತು ಅದನ್ನು ಸ್ವೀಕರಿಸದವರ ವಿರುದ್ಧ ಹೋರಾಡುವುದು ಎಂದೇ ವ್ಯಾಖ್ಯಾನಿಸುವುದರಿಂದ ಇದು ಉಲೆಮಾಗೆ ಕಷ್ಟಕರವಾದ ಪ್ರತಿಪಾದನೆಯಾಗಿರಬಹುದು. ಆದರೆ ಪ್ರತಿವಾದಿಯು ಯಾವುದೇ ಅರ್ಥವನ್ನು ಹೊಂದಲು ಇದನ್ನು ಮಾಡಲೇಬೇಕಾಗುತ್ತದೆ.
2.ದೇವರ ಮಾರ್ಗದಲ್ಲಿ ಕ್ವಿಟಲ್ (ಹೋರಾಟ) ಕೂಡ ಜಿಹಾದ್ ಫಿ ಸಬಿಲಿಲ್ಲಾಹ್‌ದಒಂದು ರೂಪವಾಗಿದೆ ಆದರೆ ಇದು ಜಿಹಾದ್‌ನ ಕಡಿಮೆ ತೀವ್ರತೆಯ ರೂಪವಾಗಿದೆ. ಜಿಹಾದ್ ಫಿ ಸಬಿಲಿಲ್ಲಾಹ್ ಕ್ಕೂ ಮತ್ತು ಪವಿತ್ರ ಯುದ್ಧಕ್ಕೂ ಯಾವುದೇ ಸಂಬಂಧವಿಲ್ಲ. ಇಸ್ಲಾಂನಲ್ಲಿ ಪವಿತ್ರ ಯುದ್ಧದ ಪರಿಕಲ್ಪನೆ ಇಲ್ಲ. ಜಿಹಾದ್ ಫಿ ಸಬಿಲಿಲ್ಲಾಹ್ವನ್ನು ಕೆಲವೊಮ್ಮೆ ದೈಹಿಕ ಸಾಮರ್ಥ್ಯದ ಪರಿಸ್ಥಿತಿಗಳ ಮೇಲೆ ಧಾರ್ಮಿಕ ಕಿರುಕುಳ ಮತ್ತು ದಬ್ಬಾಳಿಕೆಯ ವಿರುದ್ಧ ಮತ್ತು ಸರಿಯಾಗಿ ಸ್ಥಾಪಿತವಾದ ಇಸ್ಲಾಮಿಕ್ ರಾಜ್ಯದ ಆಡಳಿತಗಾರನ ನೇತೃತ್ವದಲ್ಲಿ ಹೋರಾಡಬಹುದು. ಆದಾಗ್ಯೂ, ಇಸ್ಲಾಮಿಕ್ ರಾಜ್ಯವು ರಕ್ಷಣಾರ್ಥವಾಗಿ ಹೋರಾಡುವುದು ಅಥವಾ ಯುದ್ಧವನ್ನು ಮುಂಚಿತವಾಗಿ ಘೋಷಿಸುವುದು, ಶತ್ರು ರಾಷ್ಟ್ರದೊಂದಿಗಿನ ಎಲ್ಲಾ ಒಪ್ಪಂದಗಳನ್ನು ತ್ಯಜಿಸುವುದು, ಯಾವುದೇ ಸಂದರ್ಭಗಳಲ್ಲಿ ಹೋರಾಟದಲ್ಲಿ ಪಾಲ್ಗೊಳ್ಳದವರಿಗೆ ಯಾವುದೇ ಹಾನಿಯನ್ನುಮಾಡುವುದಿಲ್ಲ, ಇತ್ಯಾದಿ ಕಟ್ಟುನಿಟ್ಟಾದ ಷರತ್ತುಗಳ ಅಡಿಯಲ್ಲಿ ಇದನ್ನು ಹೋರಾಡಬೇಕು. ವ್ಯಕ್ತಿಗಳು ಮತ್ತು ಗುಂಪುಗಳು ಯಾವುದೇ ಪರಿಸ್ಥಿತಿಯಲ್ಲಿ ಯಾವುದೇ ರೀತಿಯ ಯುದ್ಧದಲ್ಲಿ ತೊಡಗಿಸಿಕೊಳ್ಳಲು ಮತ್ತು ಅದನ್ನು ಜಿಹಾದ್ ಫೈ ಸಬಿಲಿಲ್ಲಾಹ್ಎಂದು ಕರೆಯಲುಸಾಧ್ಯವಿಲ್ಲ. 
3.ಸೂರಾ ತವ್ಬಾ (ಇದನ್ನು ಬಾರಾಹ್ ಎಂದೂ ಕರೆಯುತ್ತಾರೆ)ಸೂರಾ ಅನ್ಫಾಲ್ಸೂರಾ ಅಲ್-ಮೈದಾಹ್ಸೂರಾ ಅಲ್-ಬಕ್ರಾಹ್ಸೂರಾ ಅಲ್-ಹಜ್,ಇತ್ಯಾದಿಗಳಲ್ಲಿನ ಕುರಾನ್ ದ ಸಂದರ್ಭೋಚಿತ ಯುದ್ಧ-ಸಮಯದ ಪದ್ಯಗಳನ್ನು,ಮುಶ್ರೀಕೀನ್(ಬಹುದೇವತಾವಾದಿಗಳು, ವಿಗ್ರಹಾರಾಧಕರು) ಮತ್ತು ಅಹ್ಲ್--ಕಿತಾಬ್ (ಪುಸ್ತಕದ ಜನರು)ಗಳವಿರುದ್ಧ ಶಾಶ್ವತ ಯುದ್ಧ ನಡೆಸಲು ಬಳಸಲಾಗುವುದಿಲ್ಲ.
ಕುರಾನ್ ಎನ್ನುವುದು ಪೈಗಂಬರ ಆಡಮ್ (ಎಎಸ್) ಭೂಮಿಯ ಮೇಲೆ ಬಂದ ನಂತರ ಮಾನವೀಯತೆಗೆ ಬರುತ್ತಿರುವ ಸಾರ್ವತ್ರಿಕ ನಂಬಿಕೆಯ ಸೂಚನೆಗಳ ರೂಪದಲ್ಲಿಆರಂಭದಲ್ಲಿ ಮೆಕ್ಕಾದಲ್ಲಿ ಪೈಗಂಬರ ಮೊಹಮ್ಮದ್ (ಪಿಬಿಯುಎಚ್) ರಿಗೆ ಬೋಧಿಸಲಾದ ದೇವರಿಂದ ರಚಿಸಲ್ಪಟ್ಟ ಪದ್ಯಗಳ ಸಂಗ್ರಹವಾಗಿದ್ದುಸಮಾನ ಸ್ಥಾನಮಾನದ ಪೈಗಂಬರಗಳ ಸರಣಿ (ಕುರಾನ್ 2: 136)ಯ ಮೂಲಕ ಒಂದೇ ರೀತಿಯ ಸಂದೇಶವನ್ನು ಆ ಸಮಯದ ಮತ್ತು ಆ ಆ ಸ್ಥಳಗಳಿಗೆ ಆ ಆ ಭಾಷೆಗಳಲ್ಲಿ ಎಲ್ಲ ರಾಷ್ಟ್ರಗಳಿಗೆ ಕಳುಹಿಸಲಾಗಿದೆ. ಆದ್ದರಿಂದ, ನಮಗೆ ಶಾಂತಿ ಮತ್ತು ಸಾಮರಸ್ಯ, ನೆರೆಹೊರೆಯವರೊಂದಿಗೆ ಸ್ನೇಹದಿಂದಿರುವಿಕೆ, ತಾಳ್ಮೆ, ಸಹನೆ ಮತ್ತು ಬಹುತ್ವವನ್ನು ಕಲಿಸುವ ಈ ಆರಂಭಿಕ ಪದ್ಯಗಳು ಕುರಾನ್‌ನ ಅಡಿಪಾಯ ಮತ್ತು ರಚನಾತ್ಮಕ ಪದ್ಯಗಳಾಗಿವೆ. ಅವು ಇಸ್ಲಾಮಿನ ಮೂಲಭೂತ ಸಂದೇಶವಾಗಿದೆ.
ಆದಾಗ್ಯೂ, ಕುರಾನ್ ಮಕ್ಕಾದ ಮುಶ್ರಿಕೀನ್(ಪಾಗನ್ ಗಳು) ಮತ್ತು ಮದೀನಾದಲ್ಲಿ ವಾಸಿಸುವ ಅಹ್ಲ್--ಕಿತಾಬ್ (ಯಹೂದಿಗಳು ಮತ್ತು ಕ್ರಿಶ್ಚಿಯನ್ನರು) ಪೈಗಂಬರಯ ಮೂಲಕ ಬಂದ ದೇವರ ಸಂದೇಶವನ್ನು ಸ್ವೀಕರಿಸಲು ನಿರಾಕರಿಸಿದಾಗ ಉಂಟಾದ ತುರ್ತು ಪರಿಸ್ಥಿತಿಯನ್ನು ನಿರ್ವಹಿಸಲುಸೂಚನೆಗಳ ರೂಪದಲ್ಲಿಪೈಗಂಬರ (ಪಿಬಿಯುಎಚ್) ಮತ್ತು ಅವರ ಸಹಚರರಿಗೆ ಬೋಧಿಸಲಾದಅನೇಕ ಸಂದರ್ಭೋಚಿತ ಪದ್ಯಗಳನ್ನು ಸಹ ಹೊಂದಿದೆ. ಮಕ್ಕನ್ ಪಾಗನ್ ಗಳು ಪೈಗಂಬರ ಅವರ ನಡುವೆ ವಾಸವಾಗಿದ್ದಾಗ ಅವನನ್ನು ಹತ್ಯೆ ಮಾಡಲು ನಿರ್ಧರಿಸಿದರು. ಅವರು ಮದೀನಾಕ್ಕೆ ವಲಸೆ ಹೋದಾಗಲೂ ಅವರು ಮತ್ತು ಅವರ ಕೆಲವು ಅನುಯಾಯಿಗಳನ್ನು ಬೆನ್ನಟ್ಟಿದರು. ನಂತರದ ಯುದ್ಧದ ಈ ವಚನಗಳು ಐತಿಹಾಸಿಕವಾಗಿಬಹಳ ಪ್ರಾಮುಖ್ಯತೆಯನ್ನು ಹೊಂದಿವೆ ಮತ್ತು ನಮ್ಮ ಧರ್ಮವನ್ನು ಸ್ಥಾಪಿಸಲು ನಮ್ಮಪೈಗಂಬರ ಎದುರಿಸಬೇಕಾಗಿರುವ ಕಷ್ಟಗಳನ್ನು ನಮಗೆ ತಿಳಿಸುತ್ತದೆ. ಆದರೆ ಅವುಗಳ ಪ್ರಾಮುಖ್ಯತೆಯ ಹೊರತಾಗಿಯೂ ಅವುಗಳು,ಯುದ್ಧಗಳು ನಡೆದು ಗೆದ್ದ 1400 ವರ್ಷಗಳ ನಂತರ ಯುದ್ಧದ ಸೂಚನೆಗಳಾಗಿ ನಮಗೆ ಅನ್ವಯಿಸುವುದಿಲ್ಲ,. ನಾವು ಈಗ ಯಾವುದೇ ಯುದ್ಧದಲ್ಲಿ ತೊಡಗಿಲ್ಲ. ರಾಜಕೀಯ ಉದ್ದೇಶಗಳಿಗಾಗಿ ಈ ಯುದ್ಧದ ಪದ್ಯಗಳನ್ನು ದುರುಪಯೋಗಪಡಿಸಿಕೊಳ್ಳುವ ಜಿಹಾದಿ ವಿಚಾರವಾದಿಗಳು ಮತ್ತು 21 ನೇ ಶತಮಾನದಲ್ಲಿ ಇಂದು ನಮಗೆ ಅನ್ವಯವಾಗುತ್ತವೆ ಎಂದುಹೇಳುವ ಶಾಸ್ತ್ರೀಯ ವಿದ್ವಾಂಸರು ಕೂಡ ಇಸ್ಲಾಂ ಧರ್ಮಕ್ಕೆ ಅಪಚಾರ ಮಾಡುತ್ತಿದ್ದಾರೆ. ಮುಸ್ಲಿಮರು ಈ ಬಲೆಗೆ ಬೀಳಬಾರದು.
4ಇಂದಿನ ಆಮೂಲಾಗ್ರ ವಿಚಾರವಾದಿಗಳು ವ್ಯಾಖ್ಯಾನಿಸಿದಂತೆ ರದ್ದುಗೊಳಿಸುವಿಕೆ(ಅಬ್ ರೋಗೇಶನ್)ಯ ಸಿದ್ಧಾಂತವು ಸುಳ್ಳು ಸಿದ್ಧಾಂತವಾಗಿದೆ. ಯುದ್ಧ-ಸಮಯದ ಸೂಚನೆಗಳಂತಹ ಕೆಲವು ಆಜ್ಞೆಗಳು ತಾತ್ಕಾಲಿಕ ಅನ್ವಯವನ್ನು ಮಾತ್ರ ಹೊಂದಿರಬಹುದು ಎಂಬುದನ್ನು ಹೊರತುಪಡಿಸಿ, ನಂತರ ಅವುಗಳನ್ನು ರದ್ದುಗೊಳಿಸಲು(ಅಬ್ ರೋಗೇಶನ್) ಮಾತ್ರ ದೇವರು ಸೂಚನೆಗಳನ್ನು ನೀಡಲು ಸಾಧ್ಯವಿಲ್ಲ. ಶಾಂತಿ, ಬಹುತ್ವ, ಇತರ ಧಾರ್ಮಿಕ ಸಮುದಾಯಗಳೊಂದಿಗಿನ ಸಹಬಾಳ್ವೆ ಮತ್ತು ಪ್ರತಿಕೂಲ ಸಮಯದಲ್ಲಿ ತಾಳ್ಮೆಯನ್ನು ಪ್ರಚೋದಿಸುವ ಮಕ್ಕನ್ ಪದ್ಯಗಳು ನಂತರದ ಮದೀನನ್ ಯುದ್ಧದ ಪದ್ಯಗಳಿಂದ ರದ್ದುಗೊಂಡಿರುವ ಪ್ರಶ್ನೆಯೇ ಇಲ್ಲ. ಆದರೆ ಕುರಾನ್‌ನ ಹಲವಾರು ತಾಫ್ಸಿರ್ (ಸ್ಪಷ್ಟೀಕರಣೆ) ಪುಸ್ತಕಗಳು ನಮಗೆ ಇದನ್ನೇ ಸ್ಪಷ್ಟವಾಗಿ ಹೇಳುತ್ತವೆ. ನಮ್ಮ ಮದರಸಾಗಳು ತಮ್ಮ ವಿದ್ಯಾರ್ಥಿಗಳಿಗೆ ಇದನ್ನೇ ಕಲಿಸುತ್ತವೆ. 
ಹದಿನೆಂಟನೇ ಶತಮಾನದ ವಿದ್ವಾಂಸ ಷಾ ವಲಿಯುಲ್ಲಾ ಡೆಹ್ಲವಿ ಅವರಂತಹ ಕುರಾನ್‌ನ (ಮುತಾಅಖಿರಿನ್)ನಂತರದ-ಶಾಸ್ತ್ರೀಯ ಭಾಷ್ಯಕಾರರು ರದ್ದುಗೊಳಿಸಿದ ಪದ್ಯಗಳ ಸಂಖ್ಯೆಯನ್ನು ಆರಂಭಿಕ ಭಾಷ್ಯ ಕೃತಿಗಳಲ್ಲಿ ಉಲ್ಲೇಖಿಸಿರುವ ಐನೂರರಿಂದ ಕೇವಲ ಐದಕ್ಕೆ ಇಳಿಸಿದರು. ಆದರೂಇಂದಿನ ಅನೇಕ ಕುರಾನ್‌ನ ವ್ಯಾಖ್ಯಾನಕಾರರು ಆರಂಭಿಕ-ಶಾಸ್ತ್ರೀಯ ಭಾಷ್ಯ (ಮುತಾಖದೀಮಿನ್ಗಳನ್ನುಅನುಸರಿಸುತ್ತಿದ್ದಾರೆ ಮತ್ತು ಅವರು ವಿಭಿನ್ನ ಸಮಯ ಮತ್ತು ಸ್ಥಳದಲ್ಲಿ ಹೇಳಿದ್ದನ್ನು ಕೇವಲ ನಕಲಿಸುತ್ತಾರೆ. ಉದಾಹರಣೆಗೆ, ಕುರಾನ್‌ನ ತಾಫ್ಸಿರ್ (ಭಾಷ್ಯ) ದ ಮುಂಚಿನ ಪುಸ್ತಕಗಳು, ಒಂದೇ ಒಂದು ಕತ್ತಿ ಪದ್ಯ (ಕುರಾನ್ 9: 5) ಮಾತ್ರ ಮಕ್ಕನ್ ಅವಧಿಯ ಆರಂಭದಲ್ಲಿ ಬೋಧಿಸಲಾದ ಕುರಾನ್‌ನ 124 ಶಾಂತಿಯುತ ಪದ್ಯಗಳನ್ನು ರದ್ದುಗೊಳಿಸಿದೆ ಎಂದು ಹೇಳಿವೆ. ರದ್ದುಗೊಳಿಸುವ(ಅಬ್ ರೋಗೇಶನ್) ಸಿದ್ಧಾಂತವನ್ನು ಸುಳ್ಳು ಸಿದ್ಧಾಂತ ಎಂದು ಕರೆದ 20 ನೇ ಶತಮಾನದ ಗುಲಾಮ್ ಅಹ್ಮದ್ ಪರ್ವೇಜ್ ಅವರಂತಹ ವಿದ್ವಾಂಸರನ್ನು ನಮ್ಮ ಉಲೆಮಾಗಳು ತರ್ಕಬದ್ಧವಾಗಿರುವುದು ಇಸ್ಲಾಮಿನಲ್ಲಿ ಅಪರಾಧವಾಗಿದೆಯೋ ಎಂಬಂತೆ "ಅಕಲ್-ಪ್ರಸ್ತ್" ಎಂದು ನಿಂದಿಸಿದ್ದಾರೆ, ಅಂದರೆ ವಿಚಾರವಾದಿ. 
ಇದು ಈಗ ನಿಲ್ಲಬೇಕು ಮತ್ತು ಮುಶ್ರಿಕೀನ್ ಮತ್ತು ಅಹ್ಲ್--ಕಿತಾಬ್ ವಿರುದ್ಧ ಯುದ್ಧ ಮತ್ತು ಬಹಿಷ್ಕಾರವನ್ನು ಪ್ರಚೋದಿಸುವ ನಂತರದ ಮದೀನನ್ ಶ್ಲೋಕಗಳಿಂದ ಶಾಂತಿ ಮತ್ತು ಬಹುತ್ವವನ್ನು ಒಳಗೊಳ್ಳುವ ಮಕ್ಕನ್ ಪದ್ಯಗಳನ್ನು ರದ್ದುಗೊಳಿಸಲಾಗಿಲ್ಲ ಎಂದು ನಾವು ಘೋಷಿಸಬೇಕು. ಏಳನೇ ಶತಮಾನದ ಆರಂಭದಲ್ಲಿ ಪೈಗಂಬರ ಮತ್ತು ಅವನ ಸಹಚರರು ಆ ಯುದ್ಧಗಳನ್ನು ನಡೆಸಿದ ಕಾಲಕ್ಕೆ ಮಾತ್ರ ಯುದ್ಧದ ನಂತರದ ಪದ್ಯಗಳು ಅನ್ವಯವಾಗಿದ್ದವು. ಉದಾಹರಣೆಗೆ, ಸೂರಾ ತವ್ಬಾ, ಕ್ರಿ.ಶ 630 ರಲ್ಲಿ (ಎಹೆಚ್ 9) ತಬೂಕ್‌ಗೆ ಪೈಗಂಬರಯ ದಂಡಯಾತ್ರೆಯ ಮುನ್ನಾದಿನದಂದು ಬೋಧಿಸಲಾಯಿತು. ಯುದ್ಧ ಮುಗಿದ ನಂತರ ಭವಿಷ್ಯದಲ್ಲಿ ಇದನ್ನು ಅನ್ವಯಿಸಲಾಗುವುದಿಲ್ಲ ಎಂದು ಒಪ್ಪಿಕೊಳ್ಳಬೇಕು.
5.ಐಸಿಸ್ ಮತ್ತು ಇತರ ಆಮೂಲಾಗ್ರ ವಿಚಾರವಾದಿಗಳು ಮಂಡಿಸಿದ ಸಹಸ್ತ್ರಕ ಜಗತ್ತಿನ ಅಂತ್ಯ (ಮಿಲೇನಿಯನ್ ಎಂಡ್-ದಿ-ವರ್ಲ್ಡ್)ದ ಸಿದ್ಧಾಂತವು ಅನುಮಾನಾಸ್ಪದ ಸಿಂಧುತ್ವದ ಅಹದೀತ್ ಅನ್ನು ಆಧರಿಸಿದೆ ಮತ್ತು ಯಾವುದೇ ವಿಶ್ವಾಸಾರ್ಹತೆಯನ್ನು ಹೊಂದಿಲ್ಲ. ಮುಸ್ಲಿಮರು ಅವರನ್ನು ಗಂಭೀರವಾಗಿ ಪರಿಗಣಿಸಬಾರದು.
ಉಗ್ರಗಾಮಿ ವಿಚಾರವಾದಿಗಳು ತಮ್ಮ ಕಾರ್ಯಗಳನ್ನು ಸಮರ್ಥಿಸಿಕೊಳ್ಳಲು ಹಲವಾರು ಅಹದಿತ್‌ಗಳನ್ನು ಉಲ್ಲೇಖಿಸುತ್ತಾರೆ. ಪಾಕಿಸ್ತಾನದ ಧಾರ್ಮಿಕ ವಿದ್ವಾಂಸರು ಪ್ರಾರಂಭಿಸಿದ ಘಜ್ವಾತುಲ್ ಹಿಂದ್ (ಭಾರತದ ವಿರುದ್ಧದ ಧಾರ್ಮಿಕ ಹೋರಾಟಗಳು) ಎಂದು ಕರೆಯಲ್ಪಡುವ ಬೃಹತ್ ಪ್ರಚಾರವೂ ಈ ಸಹಸ್ತ್ರಕ ಪ್ರಬಂಧದ ಒಂದು ಭಾಗವಾಗಿದೆ. ಹದೀತ್ (ಪೈಗಂಬರರ ಮಾತುಗಳು ಎಂದು ಕರೆಯಲ್ಪಡುವ)ಅನ್ನು ವಾಹಿ (ದೇವರಿಂದ ಬೋಧನೆ) ಯೊಂದಿಗೆ ಅಪಾರ್ಥಮಾಡಬಾರದು ಎಂದು ಒತ್ತಿಹೇಳಬೇಕು. ಪೈಗಂಬರ (ಪಿಬಿಯುಎಚ್) ಮಾತನಾಡುತ್ತಿದ್ದಂತೆ ಅಹದಿತ್‌ಅನ್ನು ತಕ್ಷಣ ಬರೆಯಲಾಗಿಲ್ಲ. ಕುರಾನ್ ಒಳಗೊಂಡಿರುವ ಬೋಧನೆಗಳನ್ನು ತಕ್ಷಣವೇ ಬರೆಯಲಾಯಿತು ಮತ್ತು ಹಲವಾರು ಜನರಿಂದ ಕಂಠಪಾಠ ಮಾಡಲ್ಪಟ್ಟಿತು. ಹದೀತ್ ದೀರ್ಘ ನಿರೂಪಣೆಗಳ ಮಾಲಿಕೆಗಳ ಮೂಲಕ ನಮ್ಮ ತನಕ ಬಂದಿದೆ. ಲಕ್ಷಾಂತರ ಹದೀತ್ ಗಳನ್ನು ವಿವಿಧ ಕಾರಣಗಳಿಗಾಗಿ ನಕಲಿ ಮಾಡಲಾಗಿದೆ ಎಂದು ತಿಳಿದುಬಂದಿದೆ. ಆದ್ದರಿಂದ ಸಾಮಾನ್ಯವಾಗಿ ನಾಸ್ತಿಕರ ವಿರುದ್ಧ ಯುದ್ಧಕ್ಕೆ ಕರೆ ನೀಡುವ ಅಹದೀತ್ ಅಥವಾ ಭವಿಷ್ಯ ನುಡಿಯ ಅಂತಿಮ ಸಮಯದ ಯುದ್ಧಗಳಿಗೆ ಸಂಬಂಧಿಸಿದವುಗಳನ್ನು ಘಜ್ವಾ ಇ ಹಿಂದ್ ನಂತಹ ಹೊಸ ಯುದ್ಧಗಳನ್ನು ಪ್ರಾರಂಭಿಸಲು ಇಂದು ಬಳಸಲಾಗದು. 
6.ತಕ್ಫೈರಿಸಂ (ಇತರ ಮುಸ್ಲಿಮರನ್ನು ಕಾಫಿರ್ ಎಂದು ಕರೆಯುವ ಅಭ್ಯಾಸ) ಇಸ್ಲಾಮಿನಲ್ಲಿ ಸ್ವೀಕಾರಾರ್ಹವಲ್ಲ. ಧರ್ಮನಿಂದನೆ ಮತ್ತು ಧರ್ಮಭ್ರಷ್ಟತೆಗೆ ಯಾವುದೇ ಶಿಕ್ಷೆಯನ್ನು ದೇವರು ಸೂಚಿಸುವುದಿಲ್ಲ. ಹಾಗೆಯೇಯಾವುದೇ ಮನುಷ್ಯ, ಆಡಳಿತಗಾರ ಅಥವಾ ವಿದ್ವಾಂಸರಿಗೆ ಯಾರನ್ನೇ ಶಿಕ್ಷಿಸಲು ಅಧಿಕಾರವನ್ನು ಸಹ ಅವನು ನೀಡುವುದಿಲ್ಲ.ಆದ್ದರಿಂದ ಯಾರಾದರೂ ಈ ಯಾವುದೇ ತರಹದ ಅಪರಾಧಗಳನ್ನು ಮಾಡಿದ್ದಾರೆ ಎಂಬುದಕ್ಕೆ ಸಂಪೂರ್ಣ ಪುರಾವೆಗಳಿದ್ದರೂ ಸಹ, ಶಿಕ್ಷೆಯನ್ನು ದೇವರಿಗೆ ಬಿಡಬೇಕಾಗುತ್ತದೆ. ಆದ್ದರಿಂದ, ಕಲ್ಪಿತ ಧರ್ಮನಿಂದೆಯ ಅಥವಾ ಧರ್ಮಭ್ರಷ್ಟತೆ ಅಥವಾ ನಂಬಿಕೆಯ ಕುಂದುಗಳು (ಅಕೀದಾ) ಮತ್ತು ಅಭ್ಯಾಸಗಳ ಆಧಾರದ ಮೇಲಿನತಕ್ಫೀರ್ ನ ಎಲ್ಲ ತೀರ್ಪುಗಳು ಅನೂರ್ಜಿತವೆಂದು ಪರಿಗಣಿಸಬೇಕು.
ಧರ್ಮಭ್ರಷ್ಟತೆಗೆ ಶಿಕ್ಷೆಯನ್ನು ಸಮರ್ಥಿಸಲು ರಿಡ್ಡಾ (ಧರ್ಮಭ್ರಷ್ಟತೆ) ಯುದ್ಧಗಳ ಐತಿಹಾಸಿಕ ಉದಾಹರಣೆಯನ್ನು ಈ ಸಂದರ್ಭದಲ್ಲಿ ಉಲ್ಲೇಖಿಸಲಾಗಿದೆ. ಪೈಗಂಬರ (ಸ) ಯ ನಂತರ ಬಂದ ಮೊದಲ ಖಲೀಫನಾದ ಹಜರತ್ ಅಬೂಬಕರ್ (ಆರ್.ಎನು) ಅಧಿಕಾರವನ್ನು ವಹಿಸಿಕೊಂಡ ಕೂಡಲೇ ರಿಡ್ಡಾ (ಧರ್ಮಭ್ರಷ್ಟತೆ) ಯುದ್ಧಗಳನ್ನು ಮಾಡಿದನು. ಆದರೆ ಅದು ತುಂಬಾ ವಿಭಿನ್ನ ಸಮಯ ಮತ್ತು ಸ್ಥಳವಾಗಿತ್ತು. ಅವನನ್ನು ಹಾಗೆ ಮಾಡಲು ಯಾವ ಪರಿಸ್ಥಿತಿ ಒತ್ತಾಯಿಸಿತು ಎಂದು ನಮಗೆ ನಿಖರವಾಗಿ ತಿಳಿದಿಲ್ಲ. ಅಲ್ಲದೆ, ಇಸ್ಲಾಂ ಧರ್ಮದ ಬಗೆಗಿನ ನಮ್ಮ ತಿಳುವಳಿಕೆಯ ಸಂದರ್ಭದಲ್ಲಿ ಇಂದು ನಮ್ಮಲ್ಲಿ ಯಾರನ್ನೂ ಹಜರತ್ ಅಬೂಬಕರ್ಗೆ ಹೋಲಿಸಲಾಗುವುದಿಲ್ಲ. ನಾವು ಇಂದು ರಿಡ್ಡಾ ಯುದ್ಧಗಳ ಐತಿಹಾಸಿಕ ಉದಾಹರಣೆಯನ್ನು ಧರ್ಮಭ್ರಷ್ಟತೆಯಲ್ಲಿ ತಪ್ಪಿತಸ್ಥರೆಂದು ಭಾವಿಸುವ ಯಾರಿಗಾದರೂ ಮರಣದಂಡನೆ ಶಿಕ್ಷೆಯ ಸಮರ್ಥನೆಯಾಗಿದೆ ಎಂದು ಉಲ್ಲೇಖಿಸಲಾಗುವುದಿಲ್ಲ..
ನಂಬಿಕೆಯ ವಿಷಯಗಳಲ್ಲಿ ಇತಿಹಾಸವು ಉತ್ತಮ ಮಾರ್ಗದರ್ಶಿಯಲ್ಲ. ಇತಿಹಾಸವನ್ನು ಹಲವು ವಿಧಗಳಲ್ಲಿ ವ್ಯಾಖ್ಯಾನಿಸಬಹುದು. ಇದು ಹೆಚ್ಚಾಗಿ ಅಂದಿನ ಆಡಳಿತಗಾರರಿಗೆ ಸೂಕ್ತವಾದಂತೆ ತಯಾರಿಸಿದ ಕಥೆಗಳನ್ನು ಆಧರಿಸಿದೆ. ಕುರಾನ್ ಮತ್ತು ಹದೀತ್ ಯಾವುದೇ ಶಿಕ್ಷೆಯನ್ನು ಸೂಚಿಸುವುದಿಲ್ಲ, ಅಥವಾ ಈ ಪಾಪಗಳಿಗಾಗಿ ಇತರರನ್ನು ಶಿಕ್ಷಿಸಲು ಅವು ನಮ್ಮಲ್ಲಿ ಯಾರಿಗೂ ಅಧಿಕಾರ ನೀಡುವುದಿಲ್ಲ ಎಂಬ ಅಂಶವನ್ನುನಾವು ಗಮನಿಸಬೇಕು. ಇದು ಒಬ್ಬ ಮುಸ್ಲಿಂ ಮತ್ತು ದೇವರ ನಡುವಿನ ವಿಷಯವಾಗಿದೆ. ದೈವಿಕ ಕಾರ್ಯಗಳನ್ನು ಕೈಗೆ ತೆಗೆದುಕೊಳ್ಳುವುದರಿಂದ ನಾವು ದೂರವೇ ಇರೋಣ. ಕುರಾನ್ ಮತ್ತು ಹದೀತ್ ಆಧಾರದ ಮೇಲಿನ ಎಲ್ಲ ತಕ್ಫಿರಿ ಶಿಕ್ಷೆ ಮತ್ತು ರಿಡ್ಡಾ ಯುದ್ಧಗಳನ್ನು ನಿಷೇಧಿಸೋಣ.
7.ಇಸ್ಲಾಮಿಕ್ ಇತಿಹಾಸದಲ್ಲಿ ದೀರ್ಘಕಾಲದವರೆಗೆ, ತಮ್ಮನ್ನು ಖಲೀಫರು ಎಂದು ಕರೆದುಕೊಳ್ಳುವ ಮುಸ್ಲಿಂ ರಾಜರು ಸಾಮ್ರಾಜ್ಯಶಾಹಿ ಯುದ್ಧಗಳನ್ನು ಅನುಸರಿಸಿ ತಮ್ಮ ಪ್ರದೇಶಗಳನ್ನು ವಿಸ್ತರಿಸುತ್ತಲೇ ಇದ್ದರು. ಆ ಕಾಲದ ಮೌಲವಿಗಳು ಮುಸ್ಲಿಂ ಧರ್ಮಗ್ರಂಥಗಳನ್ನು ಆ ಕಾಲಕ್ಕೆ ತಕ್ಕಂತೆ ವ್ಯಾಖ್ಯಾನಿಸಿದರು. ಇಸ್ಲಾಂ ಧರ್ಮದ ಗಡಿಯನ್ನು ವಿಸ್ತರಿಸಲು ಈ ಯುದ್ಧಗಳನ್ನು ಜಿಹಾದ್ ಫಿ ಸಬಿಲಿಲ್ಲಾಹ್ ಎಂದು ಕರೆಯಲಾಯಿತು. ಈಗ ನಾವುಆಧುನಿಕ ರಾಷ್ಟ್ರ-ರಾಜ್ಯಗಳ ಜಗತ್ತಿನಲ್ಲಿ ವಾಸಿಸುತ್ತಿದ್ದೇವೆ; ನಮ್ಮ ಅಂತರರಾಷ್ಟ್ರೀಯ ಸಂಬಂಧಗಳು ಎಲ್ಲ ಮುಸ್ಲಿಂ ಬಹುಸಂಖ್ಯಾತ ರಾಜ್ಯಗಳು ಸೇರಿದಂತೆ ಇಡೀ ಪ್ರಪಂಚವು ಸಹಿ ಮಾಡಿದವಿಶ್ವಸಂಸ್ಥೆಯ ಚಾರ್ಟರ್ ನಿಂದ ಮಾರ್ಗದರ್ಶಿಸಲ್ಪಡುತ್ತವೆ. ಯಾವುದೇ ರಾಜ್ಯವು ಹೊಸ ಪ್ರಾಂತ್ಯಗಳನ್ನು ವಶಪಡಿಸಿಕೊಳ್ಳುವುದು ಮತ್ತು ತಮ್ಮ ನಿಯಮವನ್ನು ಅಲ್ಲಿ ಸ್ಥಾಪಿಸುವುದುಇಪ್ಪತ್ತನೇ ಶತಮಾನದ ಮೊದಲ ದಶಕಗಳವರೆಗೆ ಇದ್ದಂತೆ ಇಂದು ಅಷ್ಟು ಸರಳವಾಗಿ ಸಾಧ್ಯವಿಲ್ಲ. ಆದ್ದರಿಂದ, ಇಮಾಮ್ ಅಬು ಹಮೀದ್ ಮೊಹಮ್ಮದ್ ಅಲ್-ಗಝಾಲಿ (1058 - 1111 ಸಿಇ) ರಂಥಶ್ರೇಷ್ಠ ಪ್ರಖ್ಯಾತ ಆರಂಭಿಕ ವಿದ್ವಾಂಸರು ಇದನ್ನು ಕಡ್ಡಾಯಗೊಳಿಸಿದ್ದರೂ, ಮುಸ್ಲಿಮರು ವರ್ಷಕ್ಕೊಮ್ಮೆಯಾದರೂ ಜಿಹಾದ್ ನಿರ್ವಹಿಸುವ ಧಾರ್ಮಿಕ ಕರ್ತವ್ಯವನ್ನು ಹೊಂದಿರುವರೆಂಬ ದಾರಿ ತಪ್ಪಿದ ವಿಚಾರಗಳನ್ನು ತ್ಯಜಿಸಬೇಕು. ಅಂತಹ ವ್ಯಾಖ್ಯಾನಗಳು ಪ್ರತಿಪಾದಿಸಲ್ಪಟ್ಟಾಗಲೂ ಯಾವುದೇ ಧರ್ಮಗ್ರಂಥದ ನ್ಯಾಯಸಮ್ಮತತೆಯನ್ನು ಹೊಂದಿರುವುದು ಅನುಮಾನವೇ. ಈ ದಿನ ಮತ್ತು ಯುಗದಲ್ಲಿ ಇದು ಕೇವಲ ಅಪ್ರಾಯೋಗಿಕವಾಗಿದೆ ಮತ್ತು ಅಸಾಧ್ಯವಾದ ಕಾರ್ಯಗಳನ್ನು ಮಾಡಲು ದೇವರು ನಮ್ಮನ್ನು ಕೇಳುವುದಿಲ್ಲ (ಕುರಾನ್ 2: 286). ಅಂತಹ ಮಧ್ಯಕಾಲೀನ ವ್ಯಾಖ್ಯಾನಗಳೊಂದಿಗೆ ವ್ಯವಹರಿಸುವ ಹಿಂಸಾತ್ಮಕ, ಪರಕೀಯರನ್ನು ದ್ವೇಷಿಸುವವಾಕ್ಯಗಳನ್ನು ಮದರಸಾ ಪಠ್ಯ ಪುಸ್ತಕಗಳಿಂದ ತೊಡೆದು ಹಾಕಬೇಕು.
8.ಕುರಾನ್ಅಥವಾಹದೀಸ್‌ನಲ್ಲಿಮುಸ್ಲಿಮರಿಗಾಗಿಜಾಗತಿಕಖಿಲಾಫತ್ ಗಾಗಿಕರೆಮಾಡಲುಧರ್ಮಗ್ರಂಥದಯಾವುದೇಅನುಮತಿಇಲ್ಲ.ಆಧುನಿಕಬಹುತ್ವರಾಜ್ಯಗಳುಮೀಸಾಕ್-ಎ-ಮದೀನಾಒದಗಿಸಿದಸಂವಿಧಾನದಅಡಿಯಲ್ಲಿಪ್ರವಾದಿಮೊಹಮ್ಮದ್ (pbuh) ವಿಕಸನಗೊಂಡಮೊದಲಇಸ್ಲಾಮಿಕ್ರಾಜ್ಯದೊಂದಿಗೆಬಹಳಹೊಂದಾಣಿಕೆಯಾಗಿದೆ.ಮುಸ್ಲಿಮರಿಗೆಜಾಗತಿಕಖಿಲಾಫತ್ನ ಅಗತ್ಯವಿಲ್ಲ, ಆದರೂಮುಸ್ಲಿಂಬಹುಸಂಖ್ಯಾತರಾಷ್ಟ್ರಗಳುಕುರಾನ್ಅನುಮೋದಿಸಿದಸಹೋದರತ್ವದಮನೋಭಾವದಲ್ಲಿಸಂಪೂರ್ಣವಾಗಿಇನ್ನು ಹೆಚ್ಚಿನ ರೀತಿಯಲ್ಲಿಸಹಕರಿಸಬಲ್ಲವುಮತ್ತುಯುರೋಪಿಯನ್ಯೂನಿಯನ್ಮತ್ತುಇತರಪ್ರಾದೇಶಿಕಗುಂಪುಗಳಮಾದರಿಯಲ್ಲಿಮುಸ್ಲಿಂರಾಜ್ಯಗಳಕಾಮನ್ವೆಲ್ತ್ಅನ್ನುಸಹರಚಿಸಬಹುದು.ನಿಖರವಾಗಿಒಂದುಶತಮಾನದಹಿಂದೆಖಿಲಾಫತ್--ಉಸ್ಮಾನಿಯಾವನ್ನು (ಒಟ್ಟೋಮನ್ಖಿಲಾಫತ್) ರಕ್ಷಿಸಲುಖಿಲಾಫತ್ಚಳುವಳಿಯನ್ನುಭಾರತದಲ್ಲಿನಡೆಸಿತ್ತು, ಅದುಇನ್ನೂಸಂಪೂರ್ಣವಾಗಿಕಡಿಮೆಯಾಗಿಲ್ಲ. ಆಚಳವಳಿಯಧರ್ಮಗ್ರಂಥದನ್ಯಾಯಸಮ್ಮತತೆಯನ್ನುಹೊಸದಾಗಿಅಧ್ಯಯನಮಾಡುವುದುಮತ್ತುಅದುಮೂರ್ಖತನದ್ದುಎನ್ನುವುದುಅನಿವಾರ್ಯವಾಗಿದೆ.
9.ಆಧುನಿಕಪ್ರಜಾಪ್ರಭುತ್ವವುಅಮ್ರಾಹುಮ್ಶೂರಾಬೈನಾಹುಮ್ಕುರಾನಿನಉಪದೇಶದನೆರವೇರಿಕೆಯಾಗಿದೆ. ಆದ್ದರಿಂದ, ಮುಸ್ಲಿಮರುಬಹುಸಂಖ್ಯಾತಸಮುದಾಯವಾಗಿಅಥವಾಧಾರ್ಮಿಕಅಲ್ಪಸಂಖ್ಯಾತರಾಗಿವಾಸಿಸುವದೇಶಗಳಲ್ಲಿಪ್ರಜಾಪ್ರಭುತ್ವಸಂಸ್ಥೆಗಳಿಗಾಗಿಪ್ರಯತ್ನಿಸಬೇಕುಮತ್ತುಬಲಪಡಿಸಬೇಕು.ಪ್ರವಾದಿಯವರನಿಧನದನಂತರಮೊದಲ 30 ವರ್ಷಗಳವರೆಗೆಮಾತ್ರಇಸ್ಲಾಮಿಕ್ಇತಿಹಾಸದಲ್ಲಿಪ್ರಜಾಪ್ರಭುತ್ವದಅಧಿಕಾರದವರ್ಗಾವಣೆನಡೆದಿರುವುದುನಿಜವಾಗಿರಬಹುದು. ಅಂದಿನಿಂದಪ್ರಾಯಶ:ಕುರಾನಿಕ್ಅಮ್ರಾಹುಮ್ಶೂರಾಬೈನಾಹುಮ್ಸೂಕ್ತಿಗಳು(ಇಸ್ಲಾಮಿಕ್ವ್ಯವಸ್ಥೆಯುಮುಸ್ಲಿಮರಸಮಾಲೋಚನೆಯನ್ನುಆಧರಿಸಿದೆ - ಆಶ್ಶುರಾ 42: 38) ಹಿನ್ನೆಲೆಗೆನೂಕಲಾಗಿದೆ.ಕುರಾನ್‌ನಸಂಪೂರ್ಣಮಾನವಸಮಾನತೆಯಸಂದೇಶದೊಂದಿಗೆ (ಅಲ್-ಹುಜುರಾತ್ 49:13), ಅಮ್ರಾಹುಮ್ಶೂರಾಬೈನಾಹುಮ್ಆಧುನಿಕಪ್ರಜಾಪ್ರಭುತ್ವದಪರಿಪೂರ್ಣಸಿದ್ಧಾಂತವನ್ನುಒದಗಿಸಿದೆ.ಆದರೆಈಎರಡೂಕುರಾನ್ನಿಯಮಗಳನ್ನುಇಸ್ಲಾಮಿಕ್ಇತಿಹಾಸದುದ್ದಕ್ಕೂಕಡೆಗಣಿಸಲಾಗಿದೆ. ನಮ್ಮಇತಿಹಾಸವುಬಹುಮಟ್ಟಿಗೆಧರ್ಮನಿಷ್ಠೆಯಮೇಲಂಗಿಗಳನ್ನುಧರಿಸಿದನಿರಂಕುಶಆಡಳಿತಗಾರರಕಥೆಯಾಗಿದೆಮತ್ತುಹೆಚ್ಚಿನಉಲೆಮಾಗಳುತಮ್ಮಸರ್ವಾಧಿಕಾರಮತ್ತುಸಾಮ್ರಾಜ್ಯಶಾಹಿಯನ್ನುಬೆಂಬಲಿಸುವದಾರಿತಪ್ಪಿದಫತ್ವಾಗಳೊಂದಿಗೆಕುರಾನ್‌ನಸಾರ್ವತ್ರಿಕನಿರ್ದೇಶನಗಳನ್ನುಉಲ್ಲಂಘಿಸಿದ್ದಾರೆ.ಇದರಫಲವಾಗಿ, ಇಂದಿಗೂ, ಕೆಲವುಮುಸ್ಲಿಂರಾಷ್ಟ್ರಗಳುಉತ್ತಮವಾಗಿಕಾರ್ಯನಿರ್ವಹಿಸುವಪ್ರಜಾಪ್ರಭುತ್ವಎಂದುಹೇಳಿಕೊಳ್ಳಬಹುದು. ಜಿಹಾದಿವಿಚಾರವಾದಿಗಳುಪ್ರಜಾಪ್ರಭುತ್ವವುತಘುತ್ (ಸುಳ್ಳುದೇವತೆಅಥವಾರಾಕ್ಷಸ, ಆದರೆಈಗಹೆಚ್ಚಾಗಿಇಸ್ಲಾಂಧರ್ಮದಶತ್ರುಅಥವಾಪಾಶ್ಚಿಮಾತ್ಯಸಾಮ್ರಾಜ್ಯಶಾಹಿಯಪ್ರತಿನಿಧಿಗೆಬಳಸಲ್ಪಟ್ಟಿದೆ) ಎಂದುಪ್ರಚಾರಮಾಡುತ್ತಾರೆ.ಇದುಸಂಪೂರ್ಣವಾಗಿಸುಳ್ಳುಮತ್ತುಇಸ್ಲಾಮಿಕ್ಬೋಧನೆಗಳಿಗೆವಿರುದ್ಧವಾಗಿದೆ. ಇದನ್ನುನಮ್ಮಉಲೆಮಾಗಳುತಿರಸ್ಕರಿಸಬೇಕುಮತ್ತುಬಲವಾಗಿವಿರೋಧಿಸಬೇಕು. ಪ್ರಜಾಪ್ರಭುತ್ವವುಇಸ್ಲಾಮಿಕ್ಆಡಳಿತದಅತ್ಯುತ್ತಮಸಂಪ್ರದಾಯಗಳಲ್ಲಿದೆ. ನಮ್ಮಮೊದಲನಾಲ್ಕುಖಲೀಫರು, ಖುಲಾಫಾ--ರಶಿದೂನ್ (ಸರಿಯಾದಮಾರ್ಗದರ್ಶನ ನೀಡಿದಖಲೀಫರು) ಅವರನ್ನುಪ್ರಜಾಸತ್ತಾತ್ಮಕವಾಗಿನೇಮಕಮಾಡಲಾಗಿದ್ದು, ಅವರಹಿಂದೆಇರುವಎಲ್ಲಮುಸ್ಲಿಮರಅಭಿಪ್ರಾಯಗಳಒಮ್ಮತವಿತ್ತು.ಹುಕುಮಾತ್--ಇಲಾಹಿಯಾ (ದೇವರಸಾರ್ವಭೌಮತ್ವ) ಮತ್ತುಇಕಾಮಾತ್--ದೀನ್ (ಇಸ್ಲಾಮಿಕ್ಕ್ರಾಂತಿ) ಸ್ಥಾಪಿಸಲುತೀವ್ರವಾಗಿಪ್ರಯತ್ನಿಸಬೇಕುಕರೆ ನೀಡುವ ಆಮೂಲಾಗ್ರಸಿದ್ಧಾಂತಗಳನ್ನು ಮುಸ್ಲಿಮರುಸಂಪೂರ್ಣವಾಗಿನಿರಾಕರಿಸಬೇಕು. ಪ್ರಜಾಪ್ರಭುತ್ವವುದೇವರಿಂದನಮಗಾಗಿಆರಿಸಲ್ಪಟ್ಟಮಾರ್ಗವಾಗಿದೆಮತ್ತುಅದನ್ನುನಮ್ಮಧಾರ್ಮಿಕಪೂರ್ವಜರು (ಅಲ್-ಸಲಾಫ್ಅಲ್-ಸಾಲಿಹ್‌) ಸಾಧ್ಯವಾದಷ್ಟುಸಮಯದವರೆಗೆಅಭ್ಯಾಸಮಾಡುತ್ತಿದ್ದರು.ಇಸ್ಲಾಮಿಕ್ಇತಿಹಾಸದಮೊದಲಮೂರುದಶಕಗಳಪ್ರಜಾಪ್ರಭುತ್ವದವ್ಯವಸ್ಥೆಯನ್ನುರಾಜಪ್ರಭುತ್ವದಶೈಲಿಯಆನುವಂಶಿಕಖಿಲಾಫತ್ಅನ್ನುಸ್ಥಾಪಿಸಿದಕ್ರೂರಸರ್ವಾಧಿಕಾರಿಗಳುಹಿಂದಿಕ್ಕಿದರುಎಂಬುದುಅವರಆಯ್ಕೆಯಿಂದಲ್ಲ.ನಾಲ್ಕನೆಯಖುಲಾಫಾ-ಎ-ರಶೀದೀನ್ (ಪ್ರವಾದಿಯಸನ್ಮಾರ್ಗದಉತ್ತರಾಧಿಕಾರಿಗಳು) ಹಜರತ್ಅಲಿ(RA)ಹಜರತ್ಮುವಾವಿಮತ್ತುಇಮಾಮ್ಹುಸೇನ್ ಅಧಿಕಾರದದುರುಪಯೋಗದವಿರುದ್ಧಹೋರಾಡಿದರುಖಲೀಫಾಜನಪ್ರಿಯಇಚ್ಛೆಯ ಮೇರೆಗೆಆಯ್ಕೆಯಾಗುವಬದಲುಖಿಲಾಫತ್ಆನುವಂಶಿಕರಾಜಪ್ರಭುತ್ವಕ್ಕೆತಿರುಗುವುದನ್ನುವಿರೋಧಿಸಿ ತಮ್ಮಪ್ರಾಣವನ್ನುತ್ಯಾಗಮಾಡಿದರು.
10.ಇಸ್ಲಾಂಧರ್ಮವುವಿಶ್ವಪ್ರಾಬಲ್ಯದನಿರಂಕುಶರಾಜಕೀಯಸಿದ್ಧಾಂತವಲ್ಲ. ನಮ್ಮಜೀವನದವಿವಿಧವ್ಯವಹಾರಗಳನ್ನುನಡೆಸುವಲ್ಲಿಇಸ್ಲಾಂಧರ್ಮವುಕ್ಷಣಿಕವಾಗಿಮಾರ್ಗದರ್ಶನನೀಡುತ್ತದೆಯಾದರೂ, ಇದುಪ್ರಾಥಮಿಕವಾಗಿಮೋಕ್ಷದಆಧ್ಯಾತ್ಮಿಕಮಾರ್ಗವಾಗಿದೆ, ವಿವಿಧಪ್ರವಾದಿಗಳಮೂಲಕವಿವಿಧಯುಗಗಳಲ್ಲಿದೇವರುಮಾನವೀಯತೆಗೆಕಳುಹಿಸಿದಅನೇಕರಲ್ಲಿಒಂದಾಗಿದೆ (ಕುರಾನ್ 5:48), ಎಲ್ಲರಿಗೂಸಮಾನಸ್ಥಾನಮಾನ (ಕುರಾನ್ 2: 136, 21:25, 21:92).ಒಳ್ಳೆಯಕಾರ್ಯಗಳನ್ನುಮಾಡುವಲ್ಲಿಒಬ್ಬರಿಗೊಬ್ಬರುಸ್ಪರ್ಧಿಸಲುದೇವರುನಮ್ಮನ್ನುಕೇಳಿದ್ದಾನೆ [ಕುರಾನ್ 2: 148, 23:61] ಮತ್ತುಅದನ್ನೇನಾವುಕೇಂದ್ರೀಕರಿಸಬೇಕು. ಕುರಾನ್ಹಿಂದಿನಎಲ್ಲಾನಂಬಿಕೆಗಳನ್ನುಖಚಿತಪಡಿಸಿಮತ್ತುಮೌಲ್ಯೀಕರಿಸಲುಬಂದಂತೆ, ನಾವುಇತರಎಲ್ಲಧರ್ಮಗಳನ್ನುಒಂದೇದೈವತ್ವದಮಾರ್ಗಗಳೆಂದುಗೌರವಿಸಬೇಕುಮತ್ತುಸ್ವೀಕರಿಸಬೇಕು. ಇಸ್ಲಾಂಧರ್ಮವುಧರ್ಮಗಳಲ್ಲಿಬಹುತ್ವವನ್ನುಹೊದಿದೆ ಮತ್ತುಮುಸ್ಲಿಮರುಜನರಲ್ಲಿಬಹುತ್ವವನ್ನುಹೊಂದಿರಬೇಕು.
11.ಎಲ್ಲಾಧಾರ್ಮಿಕಗುಂಪುಗಳನ್ನುತಮ್ಮದೇಆದಷರಿಯಾಆಧಾರದಮೇಲೆತೀರ್ಪಿನದಿನದಂದುನಿರ್ಣಯಿಸಲಾಗುತ್ತದೆ. ಆದ್ದರಿಂದ, ಮುಸ್ಲಿಮರುಮಾತ್ರಸ್ವರ್ಗಕ್ಕೆಹೋಗುತ್ತಾರೆಎಂದುಹೇಳುವುದುಅಸಂಬದ್ಧವಾಗಿದೆ. ಕುರಾನ್ನಿರ್ದಿಷ್ಟವಾಗಿಅಂತಹಆಲೋಚನೆಗಳನ್ನುನಿಷೇಧಿಸಿದೆ, ಯಹೂದಿಗಳಂತಹಹಿಂದಿನಧಾರ್ಮಿಕಗುಂಪುಗಳಉದಾಹರಣೆಯನ್ನುಉಲ್ಲೇಖಿಸಿತಮ್ಮನ್ನು "ಆಯ್ಕೆಮಾಡಿದಜನರು" ಎಂದುಪರಿಗಣಿಸಿದ್ದಾರೆ.ವಾಸ್ತವವಾಗಿ, ಕುರಾನ್ಯಹೂದಿಗಳನ್ನುಸ್ವರ್ಗವುಅವರಿಗೆಮಾತ್ರಎಂದುಹೇಳಿದ್ದನ್ನುಅಪಹಾಸ್ಯಮಾಡಿದರು (2:94). ದೇವರುಎಲ್ಲಾಧಾರ್ಮಿಕಗುಂಪುಗಳಿಗೆನೀಡಲಾಗಿರುವಕಾನೂನುಗಳಪ್ರಕಾರಅವರನ್ನುನಿರ್ಣಯಿಸುವನು (ಕುರಾನ್ 5:48). ಒಬ್ಬನೇಸ್ವರ್ಗಕ್ಕೆಹೋಗುವಆಯ್ಕೆಮಾಡಿದಜನರಿಲ್ಲ. ಮುಸ್ಲಿಮರಿಗೆಬೇರೆಯಾವುದೇಧಾರ್ಮಿಕಗುಂಪನ್ನುತಿರಸ್ಕಾರದಿಂದವರ್ತಿಸಲುಯಾವುದೇಕಾರಣವಿಲ್ಲ.
12.ಅಲ್-ವಾಲಾವಾಲ್-ಬಾರಾಸಿದ್ಧಾಂತ (ನಿಷ್ಠೆಮತ್ತುನಿರಾಕರಣೆ, ಪ್ರೀತಿಯಮತ್ತುದ್ವೇಷ, ದೇವರಸಲುವಾಗಿಮಾತ್ರ) ಆಮೂಲಾಗ್ರಅಂಶಗಳಿಂದಪ್ರಚಾರಗೊಳ್ಳುತ್ತದೆಮತ್ತುನಮ್ಮಮದರಸಾಗಳಲ್ಲಿ, ವಿಶೇಷವಾಗಿಸೌದಿಅರೇಬಿಯಾದಲ್ಲಿಕಲಿಸಲಾಗುತ್ತದೆ. ಪ್ರಸ್ತುತಹೆಚ್ಚುಸಂಕೀರ್ಣವಾದಮತ್ತುಸಂಕೀರ್ಣವಾಗಿಹೆಣೆದುಕೊಂಡಿರುವಜಾಗತಿಕಸಮಾಜದಲ್ಲಿಇದುತಪ್ಪುಕಲ್ಪನೆಮತ್ತುಅಪ್ರಾಯೋಗಿಕವಾಗಿದೆ.ಇಂದುಸರಳವಾಗಿಮುಸ್ಲಿಮರೊಂದಿಗೆಮಾತ್ರಸಂಬಂಧವನ್ನುಉಳಿಸಿಕೊಳ್ಳಲುಮತ್ತುಎಲ್ಲಾಮುಸ್ಲಿಮೇತರರೊಂದಿಗೆಸಂಬಂಧವನ್ನುಕಡಿತಗೊಳಿಸಲುಸಾಧ್ಯವಿಲ್ಲ. ಈರೀತಿಯವಿಶೇಷತೆಯನ್ನುಕಲಿಸುವಮದರಸಾಪಠ್ಯಪುಸ್ತಕಗಳನ್ನುತಿದ್ದುಪಡಿಮಾಡಬೇಕು, ಏಕೆಂದರೆಇದುನಮ್ಮಮಕ್ಕಳನ್ನುಸಮಾಜದಲ್ಲಿಸಮಗ್ರಜೀವನವನ್ನುನಡೆಸದಂತೆಮಾಡುತ್ತದೆ.ಈಸಿದ್ಧಾಂತವುಮುಸ್ಲಿಮರಲ್ಲಿಇತರಮುಸ್ಲಿಮರೊಂದಿಗಿನಒಂದುನಿರ್ದಿಷ್ಟಸಂಬಂಧವನ್ನುಅರ್ಥೈಸಬಹುದು, ಕುರಾನ್ಸಹಬೆಂಬಲಿಸುವಸಹೋದರತ್ವದಭಾವನೆ (ಕುರಾನ್ 49.10), ಆದರೆಇದುಖಂಡಿತವಾಗಿಯೂಇತರಧಾರ್ಮಿಕಸಮುದಾಯಗಳೊಂದಿಗಿನಸಂಬಂಧದನಿರಾಕರಣೆಯನ್ನುಅಥೈ೯ಸುವುದಿಲ್ಲ. ಕುರಾನ್ಎಲ್ಲಾಮನುಷ್ಯರನ್ನುಗೌರವಿಸುತ್ತದೆಮತ್ತುಅವರಿಗೆಸಮಾನಘನತೆಮತ್ತುಗೌರವವನ್ನುನೀಡುತ್ತದೆ (ಕುರಾನ್ 17:70).
13.ಅಲ್-ವಾಲಾವಾಲ್-ಬಾರಾಸಿದ್ಧಾಂತದಮತ್ತೊಂದುಹಾನಿಕಾರಕಪರಿಣಾಮವೆಂದರೆ, ತಕ್ಫೀರ್ಸಿದ್ಧಾಂತದೊಂದಿಗೆ, ಇದುಮುಸ್ಲಿಮರುತಮ್ಮದೇಆದಇತರಪಂಗಡಗಳಮುಸ್ಲಿಮರೊಂದಿಗೆಸಂಬಂಧವನ್ನುಕಡಿದುಕೊಳ್ಳಲುಕಾರಣವಾಗಿದೆ.ಅನೇಕಮುಸ್ಲಿಂಉಲೆಮಾಗಳುತಕ್ಫೀರ್ಸಿದ್ಧಾಂತವನ್ನುಇತರಮುಸ್ಲಿಂಪಂಗಡಗಳನ್ನುದ್ರೋಹವೆಂದುಖಂಡಿಸಲುಬಳಸುತ್ತಾರೆಮತ್ತುಇತರರುಹೋಗಿಅವರನ್ನುಕೊಲ್ಲಲುಪ್ರೋತ್ಸಾಹಿಸುತ್ತಾರೆ. ಶಿಯಾಸ್, ಅಹ್ಮದಿಸ್ಮತ್ತುಸೂಫಿಗಳಮೇಲೆದಾಳಿಗಳುಆಗಾಗ್ಗೆನಡೆಯುತ್ತಲೇ ಇವೆ. ವಾಸ್ತವವಾಗಿ, ಮಧ್ಯಪ್ರಾಚ್ಯದಲ್ಲಿಸುನ್ನಿ-ಶಿಯಾಬಿರುಕುಇಸ್ಲಾಮಿಕ್ಸ್ಟೇಟ್ಎಂದುಕರೆಯಲ್ಪಡುವಉದಯಕ್ಕೆಹೆಚ್ಚುಸಹಾಯಮಾಡಿತು.ಉಲೇಮಾಈಎರಡೂಸಿದ್ಧಾಂತಗಳವಿರುದ್ಧಬಲವಾಗಿಹೊರಬರಬೇಕುಮತ್ತುಅವುಗಳನ್ನುಅಭ್ಯಾಸಮಾಡುತ್ತಿರುವರೀತಿಇಸ್ಲಾಮಿಕ್ ಅಲ್ಲಎಂದುಖಂಡಿಸಬೇಕು.
14.ಸಿದ್ಧಾಂತಅಲ್-ಅಮ್ರ್ಬಿಲ್-ಮರಾಫ್ವಾನ್-ನಹಿʿಅನಿಲ್-ಮುಂಕಾರ್ (ಸರಿಯಾಗಿದ್ದದ್ದನ್ನುಆನಂದಿಸುವುದುಮತ್ತುತಪ್ಪಿರುವುದನ್ನುನಿಷೇಧಿಸುವುದು) ಒಂದುಸುಂದರವಾದಇಸ್ಲಾಮಿಕ್ಸಿದ್ಧಾಂತವಾಗಿದೆಆದರೆಅದನ್ನುಬಲಪ್ರಯೋಗದಿಂದಕಾರ್ಯಗತಗೊಳಿಸಲಾಗುವುದಿಲ್ಲ.ಪ್ರಸಿದ್ಧಇಸ್ಲಾಮಿಕ್ವಿದ್ವಾಂಸಜಾವೇದ್ಅಹ್ಮದ್ಘಮಿಡಿಅವರುವಿವರಿಸಿರುವಪ್ರಕಾರ, ಮಾರುಫ್ಎಂಬಪದವುಸರಿಯಾದುದೆಂದುಸಾರ್ವತ್ರಿಕವಾಗಿಎಲ್ಲರಿಂದಅಂಗೀಕರಿಸಲ್ಪಟ್ಟಿದೆಎಂದುಸೂಚಿಸಿದರೆಮುಂಕರ್ಸಾರ್ವತ್ರಿಕವಾಗಿಎಲ್ಲರಿಂದಲೂತಪ್ಪಾಗಿಅಂಗೀಕರಿಸಲ್ಪಟ್ಟಿದೆಎಂದುಸೂಚಿಸುತ್ತದೆ.ಈಸಿದ್ಧಾಂತವುಜನರುಇಸ್ಲಾಂಧರ್ಮವನ್ನುಸ್ವೀಕರಿಸಲುಒತ್ತಾಯಿಸುವುದುಮತ್ತುkufr (ಹಜರತ್ಮೊಹಮ್ಮದ್ (pbuh)ಮಾಡುವುದನ್ನುತಡೆಯುವುದು ಅಥವಾಶಿರ್ಕ್ಪ್ರವಾದಿತನವನ್ನು ನಿರಾಕರಿಸುವುದನ್ನು(ಇತರದೇವತೆಗಳನ್ನುದೇವರುಅಥವಾಬಹುದೇವತೆಯೊಂದಿಗೆಸಂಯೋಜಿಸುವುದು) ಒಳಗೊಂಡಿರುವುದಿಲ್ಲ.ಧರ್ಮದವಿಷಯಗಳಲ್ಲಿಬಲದಿಂದಈಸಿದ್ಧಾಂತವನ್ನುಬಳಸುವುದುತಪ್ಪುಮತ್ತುಇದನ್ನುವಿರೋಧಿಸಬೇಕು. ಉಲೇಮಾಮಾರುಫ್ಮತ್ತುಮುಂಕರ್ನಂತಹಪದಗಳಬಗ್ಗೆತಮ್ಮತಿಳುವಳಿಕೆಯನ್ನುಪರಿಷ್ಕರಿಸಬೇಕುಮತ್ತುಈಸಿದ್ಧಾಂತವನ್ನುಕಾರ್ಯಗತಗೊಳಿಸಲುಬಲವನ್ನುಬಳಸುವುದರವಿರುದ್ಧಮಾತನಾಡಬೇಕು.
15.ಲಾಇಕ್ರಾಹಾಫಿಡ್ದೀನ್,ಕುರಾನ್ (2: 256), ಇದರರ್ಥ “ಧರ್ಮದಲ್ಲಿಯಾವುದೇಬಲವಂತವಿಲ್ಲ”ಎಂಬುದುಒಂದುಸಂಪೂರ್ಣಮತ್ತುಸಾರ್ವತ್ರಿಕಕುರಾನಿನಸಿದ್ಧಾಂತವಾಗಿದೆಮತ್ತುಅದನ್ನುಯಾವುದೇಸಂದರ್ಭದಲ್ಲೂಉಲ್ಲಂಘಿಸಲಾಗುವುದಿಲ್ಲ.10:99 ಮತ್ತು 18:29 ನಂತಹಕುರಾನ್‌ನಹಲವಾರುಇತರಸೂಕ್ತಿಗಳುಒಂದೇದೃಷ್ಟಿಕೋನವನ್ನುಬೆಂಬಲಿಸುತ್ತವೆ. ಇದೇದೃಷ್ಟಿಕೋನವನ್ನುಪ್ರಸ್ತುತಪಡಿಸುವಲ್ಲಿ 18:29 ನೇಶ್ಲೋಕವುಹೆಚ್ಚುದೃಢವಾಗಿದೆ: "ವಾಕುಲಿಅಲ್ಹಾಕ್ಮಿನ್ರಬ್ಬಿಕಮ್ಫಮಾನ್ಶಾಫಾಲ್ಯುಮಿನ್ವಾಮನ್ಶಾಫಲ್ಯಾಕ್ಫೂರ್." (ಸತ್ಯವುನಿಮ್ಮಭಗವಂತನಿಂದಬಂದಿದೆ, ಆದ್ದರಿಂದಯಾರುಬಯಸುತ್ತಾರೋ - ಅವರುನಂಬಲಿ;ಮತ್ತುಯಾರುಬಯಸುತ್ತಾರೋಅವರುತಿರಸ್ಕರಿಸಲಿ ).ಈಗಮಾಡುತ್ತಿರುವಂತೆ, ಉಲೇಮಾಕುರಾನಿನಈಸಾರ್ವತ್ರಿಕಬೋಧನೆಗಳನ್ನುನಿರ್ಲಕ್ಷಿಸುವುದನ್ನುನಿಲ್ಲಿಸಬೇಕುಮತ್ತುಜಿಹಾದಿಸಂಗೆಪ್ರತಿ-ನಿರೂಪಣೆಯನ್ನುರಚಿಸಲುಅವರುಬಯಸಿದರೆಅವುಗಳನ್ನುಪ್ರಚಾರಮಾಡಲುಪ್ರಾರಂಭಿಸಬೇಕು.
16.ಎಲ್ಲಾಧಾರ್ಮಿಕಗುಂಪುಗಳನ್ನುಅಹ್ಲ್--ಕಿತಾಬ್ (ಪುಸ್ತಕದಜನರುಎಂದುಪರಿಗಣಿಸಬೇಕುಅವರೊಂದಿಗೆಮುಸ್ಲಿಮರುವೈವಾಹಿಕಸಂಬಂಧಗಳುಸೇರಿದಂತೆಅತ್ಯಂತನಿಕಟ ಸಂಬಂಧವನ್ನುಹೊಂದಿದ್ದಾರೆಏಕೆಂದರೆಕುರಾನ್ಪ್ರಕಾರದೇವರುಎಲ್ಲಾರಾಷ್ಟ್ರಗಳಿಗೆಸಂದೇಶವಾಹಕರನ್ನುದಿವ್ಯದರ್ಶನಕ್ಕಾಗಿ ಕಳುಹಿಸಿದ್ದಾನೆಅದನ್ನುಸಂಗ್ರಹಿಸಿದಾಗಪುಸ್ತಕಗಳಾಗಿಪರಿಣಮಿಸುತ್ತದೆ.ಈ ಕೆಲವುಪ್ರವಾದಿಗಳನ್ನು ಉಲ್ಲೇಖಿಸಲಾಗಿದೆಮತ್ತುಅನೇಕರನ್ನುಇಲ್ಲಹದೀಸ್ಪ್ರಕಾರಅಂತಹ 124,000 ಪ್ರವಾದಿಗಳುವಿಶ್ವದಮೂಲೆಮೂಲೆಗಳಿಗೆಬಂದುದೇವರಸಂದೇಶವನ್ನುಅವರಸಮಯಮತ್ತುಸ್ಥಳದಭಾಷೆಗಳಲ್ಲಿತರುತ್ತಿದ್ದರುಈವಿಷಯದಲ್ಲಿಕುರಾನ್‌ನಲ್ಲಿದೇವರುನಿಜವಾಗಿಏನುಹೇಳುತ್ತಾನೆಂದುನೋಡೋಣ:
"ಪ್ರತಿಯೊಂದುಸಮುದಾಯಅಥವಾರಾಷ್ಟ್ರಕ್ಕಾಗಿ, ಒಬ್ಬದೂತಇದ್ದಾನೆ (ಕುರಾನ್ 10:47);"
“ನಾವುನಿಮ್ಮಮುಂದೆದೂತರನ್ನುಕಳುಹಿಸಿದ್ದೇವೆ (ಓಮುಹಮ್ಮದ್); ನಾವುಅವುಗಳಲ್ಲಿಅವರಕೆಲವೊಂದುಕಥೆಯನ್ನುನಿಮಗೆಸಂಬಂಧಿಸಿತಿಳಿಸಿದ್ದೇವೆಮತ್ತುಕೆಲವರಕಥೆಯನ್ನುನಾವುನಿಮಗೆಸಂಬಂಧಿಸಿಲ್ಲ (ಕುರಾನ್ 40:78).
“ಹೇಳು,‘ ನಾವುದೇವರನ್ನುನಂಬುತ್ತೇವೆಮತ್ತುಆತನುನಮಗೆಅಬ್ರಹಾಂ, ಇಶ್ಮಾಯೆಲ್, ಐಸಾಕ್ಮತ್ತುಅವರವಂಶಸ್ಥರಿಗೆಬಹಿರಂಗಪಡಿಸಿದಸಂಗತಿಗಳನ್ನುನಂಬುತ್ತೇವೆ ಮತ್ತುಮೋಶೆ, ಯೇಸುಮತ್ತುಪ್ರವಾದಿಗಳಿಗೆಅವರಭಗವಂತನಿಂದಬಹಿರಂಗವಾಯಿತು.. ನಾವುಅವರನಡುವೆಯಾವುದೇವ್ಯತ್ಯಾಸವನ್ನುತೋರಿಸುವುದಿಲ್ಲಮತ್ತುದೇವರಿಗೆನಾವುನಮ್ಮನ್ನುಸಲ್ಲಿಸಿದ್ದೇವೆ."" (ಅಲ್ಬಕಾರಾ: 2: 136)"ನಾವುನಿಮ್ಮಮುಂದೆಕಳುಹಿಸಿದಎಲ್ಲಾದೂತರು [ಮುಹಮ್ಮದ್] ನಾವುಬಹಿರಂಗಪಡಿಸಿದಪುರುಷರು" (ಕುರಾನ್ 12: 109)
"ನಾವುಯಾವುದೇದೇವರಸಂದೇಶವಾಹಕರನಡುವೆಯಾವುದೇವ್ಯತ್ಯಾಸವನ್ನುತೋರಿಸುವುದಿಲ್ಲ." (ಅಲ್-ಬಕಾರಾ -2: 285)ಸಾಂಪ್ರದಾಯಿಕಇಸ್ಲಾಮಿಕ್ಧರ್ಮಶಾಸ್ತ್ರಕುರಾನಿನಈವಚನಗಳನ್ನುಪ್ರಾಯಶ: ನಿರ್ಲಕ್ಷಿಸುತ್ತದೆ. ಶಾಂತಿಮತ್ತುಬಹುತ್ವದಹೊಸನಿಜವಾದಇಸ್ಲಾಮಿಕ್ಧರ್ಮಶಾಸ್ತ್ರವನ್ನುವಿಕಸಿಸುವಾಗಉಲೆಮಾದೇವರಈಬಹಿರಂಗಪಡಿಸುವಿಕೆಗಳನ್ನುಗಣನೆಗೆತೆಗೆದುಕೊಳ್ಳಬೇಕುಮತ್ತುಅದುನಮ್ಮಸಮಯದಅವಶ್ಯಕತೆಗಳಿಗೆಅನುಗುಣವಾಗಿರುತ್ತದೆಮತ್ತುಬೆಳೆಯುತ್ತಿರುವಉಗ್ರವಾದದವಿರುದ್ಧಹೋರಾಡಲುನಮಗೆಸಹಾಯಮಾಡುತ್ತದೆ.
17.ಎಲ್ಲರಿಗೂಪರಿಪೂರ್ಣಧಾರ್ಮಿಕಸ್ವಾತಂತ್ರ್ಯವನ್ನುನೀಡುವಸಮಾಜದಇಸ್ಲಾಮಿನದೃಷ್ಟಿಗೆಉಲೆಮಾಒತ್ತುನೀಡಬೇಕಾಗಿದೆ.ವಾಸ್ತವವಾಗಿಮೊದಲಬಾರಿಗೆಮುಸ್ಲಿಮರಿಗೆಶಸ್ತ್ರಾಸ್ತ್ರಗಳಿಂದತಮ್ಮನ್ನುತಾವುರಕ್ಷಿಸಿಕೊಳ್ಳಲುಅವಕಾಶನೀಡಿದಾಗಎಲ್ಲಾಧಾರ್ಮಿಕಸಮುದಾಯಗಳಧಾರ್ಮಿಕಸ್ವಾತಂತ್ರ್ಯವನ್ನುರಕ್ಷಿಸಲುಇದುಅಗತ್ಯವೆಂದುಅವರಿಗೆತಿಳಿಸಲಾಯಿತು. "ದೇವರುಒಂದುಗುಂಪಿನಜನರನ್ನುಇನ್ನೊಬ್ಬರಮೂಲಕಪರೀಕ್ಷಿಸದಿದ್ದರೆ, ಖಂಡಿತವಾಗಿಯೂಮಠಗಳು, ಚರ್ಚುಗಳು, ಸಿನಗಾಗಗಳುಮತ್ತುಮಸೀದಿಗಳನ್ನುಕೆಳಗಿಳಿಸಬಹುದಿತ್ತು, ಅದರಲ್ಲಿದೇವರಹೆಸರನ್ನುಹೇರಳವಾಗಿಸ್ಮರಿಸಲಾಗುತ್ತದೆ." (ಕುರಾನ್ 22: 40).ಸ್ಪಷ್ಟವಾಗಿಮುಸ್ಲಿಮರಿಗೆಧಾರ್ಮಿಕಸ್ವಾತಂತ್ರ್ಯಕ್ಕಾಗಿಹೋರಾಡಲುಕೇಳಲಾಗುತ್ತಿತ್ತು, ಆದರೆಮುಸ್ಲಿಮರಿಗೆಮಾತ್ರಧಾರ್ಮಿಕಸ್ವಾತಂತ್ರ್ಯಕ್ಕಾಗಿಅಲ್ಲ.ಆದ್ದರಿಂದ, ಧಾರ್ಮಿಕಅಲ್ಪಸಂಖ್ಯಾತರುಕಿರುಕುಳವನ್ನುಎದುರಿಸುತ್ತಿರುವಾಗಮುಸ್ಲಿಮರುಮಾತನಾಡುವುದುಕಡ್ಡಾಯವಾಗಿದೆ, ವಿಶೇಷವಾಗಿಮುಸ್ಲಿಂಬಹುಸಂಖ್ಯಾತದೇಶಗಳಲ್ಲಿಇದುಸಂಭವಿಸಿದಲ್ಲಿ.ಧಾರ್ಮಿಕಸ್ವಾತಂತ್ರ್ಯಮತ್ತುಮಾನವಹಕ್ಕುಗಳುಅವಿನಾಭಾವಎಂದುಇಸ್ಲಾಂಸ್ಪಷ್ಟವಾಗಿಗುರುತಿಸಿದೆ. ಈದೃಷ್ಟಿಯನ್ನುಮಾತುಗಳಲ್ಲಿಮತ್ತುಕಾರ್ಯಗಳಲ್ಲಿಪ್ರಚಾರಮಾಡುವುದುಉಲೆಮಾದಕೆಲಸವಾಗಿದೆ. ಭಾರತದಲ್ಲಿನಮುಸ್ಲಿಮರು, ವಿಶೇಷವಾಗಿಉಲೆಮಾಗಳುಪಾಕಿಸ್ತಾನಮತ್ತುಬಾಂಗ್ಲಾದೇಶದಂತಹದೇಶಗಳಲ್ಲಿಹಿಂದೂಮತ್ತುಕ್ರಿಶ್ಚಿಯನ್ಅಲ್ಪಸಂಖ್ಯಾತರಪರವಾಗಿನಿಲ್ಲುವುದುಕಡ್ಡಾಯವಾಗಿದೆ.
18.ಇಸ್ಲಾಂನಲ್ಲಿಆತ್ಮಹತ್ಯೆಯನ್ನುನಿಷೇಧಿಸಲಾಗಿದೆ. (ಕುರಾನ್: 4:29) ಇದುಯಾವುದೇಸಂದರ್ಭದಲ್ಲೂಹರಾಮ್ (ನಿಷೇಧಿತ) ಆಗಿದೆ. ಇದನ್ನುಎಂತಹದೊಡ್ಡಪಾಪವೆಂದುಪರಿಗಣಿಸಲಾಗಿದೆ ಎಂದರೆ ಪ್ರವಾದಿಮೊಹಮ್ಮದ್ (ಸ) ತನ್ನಸಹಚರರಲ್ಲಿಒಬ್ಬನಾದಘಾಜಿಯಅಂತ್ಯಕ್ರಿಯೆಯಪ್ರಾರ್ಥನೆಯಲ್ಲಿಭಾಗವಹಿಸಲುನಿರಾಕರಿಸಿದ್ದರು, ಪ್ರವಾದಿಯಯುದ್ಧದಭಾಗವಾಗಿಸೈನ್ಯದಲ್ಲಿದ್ದ ಆತಗಾಯಗಳನೋವನ್ನು ಸಹಿಸಲಾಗದೆ ಆತ್ಮಹತ್ಯೆಮಾಡಿಕೊಂಡಿದ್ದನು.ಆತ್ಮಹತ್ಯೆಯನ್ನುಮುಸ್ಲಿಮರುಯುದ್ಧದತಂತ್ರವಾಗಿಬಳಸಲಾಗುವುದಿಲ್ಲ. ಅಸಹಾಯಕರಾಗಿ, ಕಿರುಕುಳವನ್ನುಎದುರಿಸುತ್ತಿರುವಮತ್ತುಬೇರೆಯಾವುದೇಶಸ್ತ್ರಾಸ್ತ್ರಗಳನ್ನುಹೊಂದಿರದಮುಸ್ಲಿಮರುಹುತಾತ್ಮಕಾರ್ಯಾಚರಣೆಎಂದುಕರೆಯಲ್ಪಡುವತಮ್ಮದೇಹಗಳನ್ನುಯುದ್ಧದಆಯುಧಗಳಾಗಿಬಳಸಬಹುದುಎಂಬವಾದವುಸಂಪೂರ್ಣವಾಗಿಸುಳ್ಳು.ಕುರಾನ್ಮತ್ತುಹದೀಸ್‌ನಲ್ಲಿನಸ್ಪಷ್ಟನಿರ್ದೇಶನಗಳಹಿನ್ನೆಲೆಯಲ್ಲಿಇದುನೀರನ್ನುಹಿಡಿದಿಟ್ಟುಕೊಳ್ಳುವುದಿಲ್ಲ. ಉಲೆಮಾಇದನ್ನುಸ್ಪಷ್ಟಪಡಿಸಬೇಕುಮತ್ತುಈವಿಷಯದಬಗ್ಗೆಇಸ್ಲಾಂಧರ್ಮದನಿಜವಾದನಿಲುವನ್ನುಪ್ರಚಾರಮಾಡಬೇಕು.ಪಾಕಿಸ್ತಾನದದಿಯೋಬಂದಿಮತ್ತುಅಹ್ಲ್-ಎ-ಹದೀಸಿಮದರಸಾಗಳಲ್ಲಿಇಸ್ಲಾಮಿಕ್ಶಿಕ್ಷಣವನ್ನುಪಡೆದತಾಲಿಬಾನ್, ಭಾರತದಲ್ಲಿನಮಗೆಸಹನಾಚಿಕೆಗೇಡಿನಸಂಗತಿ,ಇದುಭಾರತದಲ್ಲಿನಮ್ಮದೇಮದರಸಾಗಳಂತೆಯೇಅದೇಪಠ್ಯಪುಸ್ತಕಗಳನ್ನುಬಳಸುತ್ತದೆ, ಆತ್ಮಹತ್ಯೆಯನ್ನುಯುದ್ಧದಕಾನೂನುಬದ್ಧತಂತ್ರವೆಂದುಪರಿಗಣಿಸುತ್ತದೆ.ನಿಸ್ಸಂಶಯವಾಗಿಉಲೆಮಾಗಳುಇಸ್ಲಾಂನಲ್ಲಿಆತ್ಮಹತ್ಯೆಮತ್ತುಮುಗ್ಧರನ್ನುಕೊಲ್ಲುವುದುಉನ್ನತಮಟ್ಟದಲ್ಲಿಸಂಪೂರ್ಣವಾಗಿನಿಷೇಧಿಸಲಾಗಿದೆಎಂದುತಮ್ಮವಿದ್ಯಾರ್ಥಿಗಳಿಗೆವಿವರಿಸಿಲ್ಲ. 
ಉಲೆಮಾಯೂಟ್ಯೂಬ್ಚಾನೆಲ್‌ಗಳಲ್ಲಿವೀಡಿಯೊಗಳುಮತ್ತುಪಾಡ್‌ಕಾಸ್ಟಗಳನ್ನುಮಾಡಲುಪ್ರಾರಂಭಿಸುವಮೊದಲು, ಅವರುಏನುಹೇಳಲಿದ್ದಾರೆಎಂಬುದರಕುರಿತುಅವರುಉದ್ದೇಶಪೂರ್ವಕವಾಗಿಮಾತನಾಡುತ್ತಾರೆಎಂದುನಾನುಭಾವಿಸುತ್ತೇನೆ. ಕೇವಲಭವ್ಯವಾದವಾಕ್ಚಾತುರ್ಯವುನಮಗೆಎಲ್ಲಿಯೂಸಿಗುವುದಿಲ್ಲಎಂದುಅವರುಅರ್ಥಮಾಡಿಕೊಳ್ಳಬೇಕು. "ಇಸ್ಲಾಂಧರ್ಮಶಾಂತಿಯಧರ್ಮ" ಎಂಬಂತಹಪ್ಲ್ಯಾಟಿಟ್ಯೂಡ್ಸ್ಎಲ್ಲಾಅರ್ಥಗಳನ್ನುಕಳೆದುಕೊಂಡಿವೆ.ನಮ್ಮದೈನಂದಿನಅನುಭವದಭಾಗವಾಗಿರುವವಿಭಿನ್ನವಾಸ್ತವದಹಿನ್ನೆಲೆಯಲ್ಲಿಇಂತಹಕ್ಲೀಷೆಗಳುನಿಜಕ್ಕೂಹಾಸ್ಯಾಸ್ಪದಆಗಿಮಾರ್ಪಟ್ಟಿವೆ. ಪ್ರಾರ್ಥನೆಯಸಮಯದಲ್ಲಿ, ಮುಸ್ಲಿಮರುಮಸೀದಿಗಳಒಳಗೆಸಹಮುಸ್ಲಿಮರನ್ನುಕೊಲ್ಲಲುತಮ್ಮನ್ನುತಾವುಸ್ಫೋಟಿಸಿಕೊಳ್ಳುವುದುಅಪರೂಪದಸಂಗತಿಯಲ್ಲ.ಜನರುತಮ್ಮತಕ್ಫಿರಿಸಿದ್ಧಾಂತವನ್ನುಮನಗಂಡಕಾರಣಇದುಸಂಭವಿಸುತ್ತಿದೆ. ತಮ್ಮನಂಬಿಕೆಮತ್ತುಆಚರಣೆಯಲ್ಲಿಮುಸ್ಲಿಮರಾಗಿದ್ದರೂಸಹಅವರುನಾಸ್ತಿಕರಾಗಿದ್ದಾರೆಂದುಪರಿಗಣಿಸುವಮರಣದಂಡನೆಯನ್ನುಶಿಕ್ಷಿಸಬಹುದೆಂದುಭಾವಿಸಲುತಕ್ಫೈರಿಸಂಅವರಿಗೆಅಧಿಕಾರನೀಡುತ್ತದೆ.ಮತ್ತು, ಸಹಜವಾಗಿ, ಕಾಫಿರ್ (ನಾಸ್ತಿಕರನ್ನು) ಮತ್ತುಮುಶ್ರಿಕ್ (ವಿಗ್ರಹಾರಾಧಕರನ್ನು) ಕೊಲ್ಲುವುದನ್ನುಜಿಹಾದ್ಎಂದುಪರಿಗಣಿಸಲಾಗುತ್ತದೆ, ಇದನ್ನುಮದರಸಾಪಠ್ಯಪುಸ್ತಕಗಳಲ್ಲಿಸಹಕಲಿಸಲಾಗುತ್ತದೆ.
ಭಾರತದಲ್ಲಿಯಾವುದೇಮದರಸಾಶಿಕ್ಷಕರುಈಬೋಧನೆಗಳನ್ನುತಮ್ಮವಿದ್ಯಾರ್ಥಿಗಳಿಗೆಒತ್ತುನೀಡುವುದಿಲ್ಲಎಂದುಒಬ್ಬರುಖಚಿತವಾಗಿಹೇಳಬಹುದು.ಆದರೆಜಿಹಾದ್ಮತ್ತುಕ್ವಿಟಲ್ಮತ್ತುಮೇಲೆಉಲ್ಲೇಖಿಸಲಾದಇತರಸಿದ್ಧಾಂತಗಳವ್ಯಾಖ್ಯಾನಗಳಕನಿಷ್ಠಉಪಸ್ಥಿತಿಯುಕನಿಷ್ಠಕೆಲವುವಿದ್ಯಾರ್ಥಿಗಳಲ್ಲಿಆಮೂಲಾಗ್ರಮನಸ್ಥಿತಿಯನ್ನುಸೃಷ್ಟಿಸುತ್ತದೆಎಂದುಖಚಿತವಾಗಿಹೇಳಬಹುದು.
 ಪಾಕಿಸ್ತಾನದಜಿಹಾದಿಸಂಘಟನೆಗಳದಂಡನ್ನುಕುರಿತುಮಾತನಾಡದೆ, ಐಸಿಸ್ಮತ್ತುಅಲ್-ಖೈದಾದಂತಹವರುಈದಿನಗಳಲ್ಲಿಆನ್‌ಲೈನ್‌ನಲ್ಲಿಹೆಜ್ಜೆಹಾಕುತ್ತಿದ್ದಾರೆ.ಆದ್ದರಿಂದ, ನಮ್ಮಶಾಸ್ತ್ರೀಯಧರ್ಮಶಾಸ್ತ್ರದಲ್ಲಿಉಗ್ರಗಾಮಿವಿಚಾರಗಳಸೋಂಕಿಗೆಒಳಗಾಗಲುಮುಸ್ಲಿಂಯುವಕಮದರಸಾಗೆಹೋಗಬೇಕಾಗಿಲ್ಲ. 
ಉತ್ತಮವೃತ್ತಿಜೀವನವನ್ನುಹೊಂದಿರುವಅನೇಕವೃತ್ತಿಪರರುವಿಶ್ವದಾದ್ಯಂತಜಿಹಾದಿಚಳುವಳಿಗಳಿಗೆಸೇರುತ್ತಿದ್ದಾರೆ. ಕೆಲವುಭಾರತೀಯವೃತ್ತಿಪರರುಸಹಐಸಿಸ್ಸಿದ್ಧಾಂತದಿಂದಆಮಿಷಕ್ಕೊಳಗಾಗಿದ್ದಾರೆ.ಆದ್ದರಿಂದನಮ್ಮಯುವಕರನ್ನುಏಕಪಕ್ಷೀಯವಾಗಿಒಂದುಸಿದ್ಧಾಂತವನ್ನುಬಳಸುವವಾದಗಳಧರ್ಮಶಾಸ್ತ್ರದಆಧಾರವನ್ನುನಿರಾಕರಿಸುವಲ್ಲಿಪ್ರತಿ-ನಿರೂಪಣೆಯನ್ನುರಚಿಸುವಕಾರ್ಯವನ್ನುಕೈಗೆತ್ತಿಕೊಳ್ಳುವಪಾದ್ರಿಗಳುಕಡ್ಡಾಯ ಕೆಸಸವಾಗಿದೆ.



No comments:

Post a Comment